ಸೋಮವಾರ, ಮೇ 28, 2018

ಸುನೀಲನಾಗು ನೀ

ಕಂಡವರಿಗೆ ಎದುರಾಗಿ

ಎದುರವರ ಮನಕೆ ಮುಳುವಾಗಿ

ಮಾತೊಳಗೆ ಯುದ್ಧ ಸನ್ನಿಧಿಗೊಯ್ವ

ಎದುರಾಳಿಗಳೆದೆಯಲಿ

ಹರಿಗತ್ತಿಯಾಗಿ ತೊಯ್ದು

ಮಾತು ಖಡ್ಗವಾಗಿ

ನೋಟ ಕಟುವಾಗಿ

ದೇಹ ಬೃಹದ್ಭಾರವಾಗಿ

ಲೋಕದ ಪರಮಾರ್ಥ

ನಿನಗೇಕೆ ಸುಮ್ಮನಿರು

ಸುನೀಲನಾಗಿ

 

ಮಾತು ಮನದಿಂದತ್ತತ್ತ

ಸುಳಿದು ಸುರಗಂಗೆಯಾಗಲೂ

ಸರಿ

ಬರದೊಳಗ ಝರಿಯಾಗಲೂ

ಸರಿ

ಮುಟ್ಟಿ ಕುಡಿಯಲೊಪ್ಪದ

ಕಡಲುಪ್ಪಾಗಲೂ ಸರಿ

ಮನ ಬಗೆದಂತದು

ತಾನು ತಿಳಿದಂತದು

ನೀನ್ ಹುಟ್ಟಿ ಬೆಳೆದ ಕೇರಿ

ದಾರಿಗಳ ಗುಣವನುಸುರುವುದೀ ಮಾತು

ಬಿಡು ಪರಮಾರ್ಥ ಚಿಂತೆ

ಸುನೀಲನಾಗು ನೀ

ಸೋಮವಾರ, ಮೇ 21, 2018

ಯುಗಾಚಾರ್ಯ

ಚಿಕ್ಕಂದಿನಿಂದ ಕಂಡಿದ್ದನವನು

ಸಾತ್ಯಕಿಯನ್ನು ಆದರೇನು

ಸಾತ್ಯಕಿಗೆ ಭೇದಿಸಲಾಗಲಿಲ್ಲ

ಕೃಷ್ಣನ ಮನದಿಂಗಿತ ಅರಿವಾಗಲಿಲ್ಲ

 

ರಣನೀತಿ, ರಾಜ ನೀತಿಯಲಿ

ನೀತ್ಯಾಚಾರ್ಯನವನು

ಸಂಧಾನ, ವಿಶ್ವಾಸಗಳಲಿ

ಯುಗಾಚಾರ್ಯನವನು

 

ಕೈಲಾಗದ ಪಾಂಚಾಲಿಗೆ 

ಕೃಪಾಚಾರ್ಯನವನು

ಕೈಲಾದ ಪಾಂಡವರಿಗೆ

ಧರ್ಮಾಚಾರ್ಯನವನು

 

ಕರೆಯದ ಹೊರತು ಬರದೆ

ನಿಂತನವನು

ವ್ಯಾಕುಲಿಸಿ ಕರೆದೊಡನೆ

ಬಿಡನವನು

 

ಪಗಡೆಯ ದಾಳ ಉರುಳುವ

ಮೊದಲು ಭಿನ್ನಹವಲ್ಲದ 

ಕರೆಬರಲೆಂದು ಬಗೆದನಿವನು  

ಹೊರನಿಂದು ಕಾದನಿವನು

 

ಕರೆಯದು ಬಂತವಗೆ

ಎಂದು? ಎಲ್ಲ ಮುಗಿದೇ

ಹೋಗಿ ಪಾಂಚಾಲಿಯ ಮುಡಿ

ವಸ್ತ್ರ ವೈಭವಗಳೆಲ್ಲ ಕದಡಿ

 

ಧಾರಾಕಾರ ಕಣ್ಣೀರು ತಂದು

ಯಾರು ಏನೂ ಮಾಡದಂದು

ಎಲ್ಲ ಬಲ್ಲವರಾಗರವಾಗಿದ್ದ

ಪಾಂಡವರೈವರ ಗೆದ್ದು ಬೀಗಿದ್ದ.

ಶನಿವಾರ, ಮೇ 19, 2018

ಸೋತವರ ಸೊಡರಲ್ಲಿ

ಸೋತವರ ಸೊಡರಲ್ಲಿ
ಗೆಲುವೆದ್ದು ಬೀಗಿತು
ಮೀಸಲು, ಶೇಷದ
ಹಮ್ಮು ಬಿಮ್ಮುಗಳಿಲ್ಲದಿದ್ದರೂ
ಸೋತವರಿಗೆ ಸಂವಿಧಾನ
ನೆರಳಾಯಿತು.

ಹಿಂದುಳಿದವರ,
ಕೈಲಾಗದವರ,
ಕೆಳ ಸ್ತರದ,
ದೇಶದ ಸರ್ವರ ಹಿತವನೂ
ಕಾಯುವೆನೆಂದೆಂಬ
ದೇಶದ ಮಹಾಗ್ರಂಥ
ಸೋಲ ಸಿಂಹಾಸನಕ್ಕೇರಿಸಿದೆ.

ನೂರು ಸೋಲು ಒಂದೇ
ಗೆಲುವಿನ ಮಹಾ ಮಂತ್ರ
ವೆಂದರೆ ಹೊರತು,
ಸೋತು ಸೋತವರ
ಕೂಟ ಹೆಣೆದರದು
ಗೆಲುವಿನ ಸಿಂಹಾಸನವೇ .

ಸೋಲುವರ ಕೂಟವಿರಲಿ
ಗೆದ್ದವರ ಹಜಾರವಿರಲಿ
ಸೋಲು ಗೆಲುವಿನ
ತಾಳೆಯನೇ ಹಾಕದ
ಮುತ್ಸದ್ದಿಗಳಿರಲಿ
ನಾವು ನಾವು ಗೇಯ್ದರಷ್ಟೇ
ಬದುಕು... ಅದು ಸುವಿಸ್ತಾರ
ಸುವಿಶಾಲ ಸುನೀಲ .


ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...