ಸೋಮವಾರ, ಮಾರ್ಚ್ 9, 2020

ನಾನಿನ್ನೂ ಮನಗಂಡಿಲ್ಲ

ಅಗೋ! ನೋಡಲ್ಲಿ.
ಹಿರಿದಾರಿಯೊಳಗೆ ಮೊರೆಯುವ
ಕಾರುಗಳ ಮಾಲೀಕ ನಾನಾಗಲಿಲ್ಲ,
ಪೂರ್ವ-ಪಶ್ಚಿಮ ಸಮುದ್ರಗಳ ದಾಟಿ
ನಾನೋಡಲಿಲ್ಲ,
ಉತ್ತರದ ಹಿಮಾಲಯವನು ದಾಟುವ
ಸುಯೋಗವದು ದೊರೆತೇ ಇಲ್ಲ.

ಇರುವ ದೇಶದೊಳಗೆ ಭಲಾರೆ
ಚಾಲಾಕಿ ನಾನಾಗಲಿಲ್ಲ.
ಅನ್ಯರಿಗೆ ಮೆತ್ತೆ ಹೂವಿನ ದಿಂಬಾಗಿ
ನಾ ಮಾಡುತ್ತಿರುವುದೇನೋ ಅರಿವಿಲ್ಲ,
ಮಾಡುವ ಕೃತಿಯೊಳಗೆ ಮನವಿಲ್ಲ,
ಮಾಡದ ಕೃತಿಗಳೆಡೆಗೆ ಬಿಡುವಿಲ್ಲ,
ನಾನೇನೋ ಇನ್ನು ಅರಿಯಲಾಗಿಲ್ಲ,
ಎಲ್ಲರ ಜೀವನವೂ ಹೀಗೆಯೇನೋ?
ನಾನಿನ್ನೂ ಮನಗಂಡಿಲ್ಲ.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...