ಭಾನುವಾರ, ಡಿಸೆಂಬರ್ 24, 2017
ಮಾನವೀಯತೆ - ನಿನ್ನ ವಿಳಾಸವೆಲ್ಲಿ
ಭಾನುವಾರ, ಡಿಸೆಂಬರ್ 3, 2017
ನನಗಾಗಿ ಜನ್ಮ ತಳೆದ ಜೇನ ಹನಿ
ಭಾನುವಾರ, ನವೆಂಬರ್ 26, 2017
ಇರದಿದುಮ್ ಅವಗಾಹಿಸಿ ಇರ್ಪುದ ಸ್ಪುರಿಸು
ನಿನ್ನಿಂದ ಕೈ ಮುಗಿಸಿ
ತಾನಿರ್ಪ ಜಗದಾಗರಗಳಾವನೂ
ಎಳೆಯೊಳಗೂ ಅರುಹದೇ
ಇದೇಮ್ ಧರ್ಮ ನಿರಪೇಕ್ಷ ಪರೀಕ್ಷೆ
ಅದರೊಳಗೂ ಇಳಿ
ಬರುವುದಿರುವುದೇಮ್ ತಾನಳೆದು
ಇರದಿಹ ಗುಣವಂ ಅವಗಾಹಿಸಿ
ಇರ್ಪುದ ಸ್ಪುರಿಸು
ಅದೇ ಧರ್ಮ
ಅದೇ ಜ್ಞಾನ
ಅದೇ ವಿಜ್ಞಾನ
ನಗುತಿಹಳು ನೋಡಲ್ಲಿ ಕನ್ನಡಮ್ಮ
ಕನ್ನಡವ ಬೆಳೆಸೆನ್ನದಿರು
ಕನ್ನಡವನುಳಿಸಿ ಬೆಳೆಸಲು
ಅದೇನು ಕಮರುತಿರುವ ಗಿಡವೇ ?
ಬತ್ತುತ್ತಿರುವ ನದಿಯೇ?
ಕನ್ನಡವೊಂದು ಹೆಮ್ಮರ
ನೆರಳರಸಿ ಬರುವರಿಗಾಶ್ರಯ
ದಣಿದವರಿಗೊಂದು ತಂಗುದಾಣ
ಬಳಲಿದವರ ತಲೆಗೊಂದು
ಮೆತ್ತೆ ಹೂವಿನ ತಲೆದಿಂಬು
ಹಮ್ಮೇನು ಬಿಮ್ಮೇನು
ಯಾರ ಹಂಗೇನು ಕನ್ನಡಕೆ
ಯುಗ ಯುಗಾಂತರಗಳುರುಳಿ
ತಲೆ ತಲಾಂತರಗಳಳಿದರೂ
ನಗುತಿಹಳು ನೋಡಲ್ಲಿ ಕನ್ನಡಮ್ಮ.
ಬುಧವಾರ, ನವೆಂಬರ್ 15, 2017
ಸೌಜನ್ಯ
ಮೌನವೆಂದರೇನು?
ಮಾತೆಂದರೇನು?
ಮೌನ ಮಾತುಗಳ ಬೆಲೆ
ಎಲ್ಲೆಲ್ಲಿ ಎಷ್ಟೆಷ್ಟು
ಎಲ್ಲಕೂ ಬೆಲೆಯಿದು
ಸೌಜನ್ಯ!
ಪ್ರಕೃತಿಯೆಂದರೇನು?
ವಿಕೃತಿಯೆಂದರೇನು?
ಪ್ರಕೃತಿ ವಿಕೃತಿಗಳೆರಡಕ್ಕೂ
ಜುಗಲ್ ಬಂದಿ ಅದೇ
ಸೌಜನ್ಯ!
ಅಕ್ರಮ ತಾನ್ ಮನದೊಳಗೆ
ಮೇರೆ ಮೀರಿ
ಉಕ್ಕಿ ಹರಿಯೆ
ಸಕ್ರಮ ತಾನ್ ಮನದೊಡೆಯ
ತಂದು ತಹಬದಿಯದು
ಸೌಜನ್ಯ!
ಗುರುವಾರ, ನವೆಂಬರ್ 9, 2017
ಬಾಳಿಗೊಂದು ದೀಪಿಕೆ
ಕಾರ್ಯದಲ್ಲೊಂದು ತತ್ಪರತೆ
ಬದುಕೊಳಗೊಂದು ಘನತೆ
ಅನ್ಯರೊಡನಾಟಗಳೊಳಗೂ
ಅವರರವರ ಬಾಳ್ಗೊಂದು ದೀಪಿಕೆ
ಏನಿಲ್ಲಿ ಕಾಣುತಿಹುದು?
ತಂತ್ರ- ಜ್ಞಾನಗಳನೆಲ್ಲ ಮೀರಿದ
ಮಾನವೀಯತೆ
ಕನ್ನಡವೇ ತಾನ್ ಮನುಜನಾಗಿ
ಅವತರಿಸಿ ಕುಂತಂತೆ
ಧೀಮಂತ ಕನ್ನಡತಿ
ಮನವೇನು ಗುಣವೇನು
ಮನುಜನ ಬುದ್ಧಿಯ ಸುಪರ್ದಿ
ಯೊಳಗೇನೇನೊ ಮಾಯೆ
ಅದರೊಳಗಿಳಿದು ತನ್ನ ತಾ
ಮರೆತಂತೆ ಜೀವನರಂಗದೊಳಗೆ
ತಾ ಜಾಣೆ ಈ ಕನ್ನಡತಿ
ನುಡಿಸಿದರೆಷ್ಟೋ ಸಂತೋಷ
ನಗಿಸಿದರೆಷ್ಟೋ ಉನ್ಮಾದ
ಮನುಜರ ಮನವರಿದು
ನಡೆಯುವ ಈ ಪೆಣ್ ಗಿಲ್ಲ ಸೋಲು
ಇದು ಶತ ಸಿದ್ಧ.
ಶುಕ್ರವಾರ, ನವೆಂಬರ್ 3, 2017
ನಮ್ಮ ನರೇಶ
ಎತ್ತರದ್ದೊಂದು ನಿಲುವು
ದಿಟ್ಟವಾದ್ದೊಂದು ನೋಟ
ಅರಿವ ಜ್ಞಾನಗಳೊಳಗೆ
ಸ್ಪಷ್ಟವಾದ್ದೊಂದು ಅರಿಮೆ
ನಡೆಯೊಳಗೆ ನಿಜ
ಜೀವನವರಿತ ಚತುರ
ಹೇಳಿ-ಕೇಳುವುದರೊಳಗಿನ
ನಂಬಿಕೆಗಳನೆಲ್ಲಾ ದೂರ ನೂಕಿ
ತನ್ನಾತ್ಮ ಸಂತೋಷದೊಳಗೆ
ತಲ್ಲೀನನಿವನು
ಸಂತೋಷಿಗಳೊಳಗೂ
ದುಃಖಿಗಳೊಳಗೂ
ಅವರೇ ಆಗಿ ನಿಂತುಬಿಡುವನೀ
ಹುಡುಗ
ಆಗಾಗ ಬೆದಕಿರುವ 'ನೀನೊಬ್ಬ ದಡ್ಡ'
ಇನ್ನೊಮ್ಮೆ ಕೆಣಕಿರುವ 'ನೀನೊಬ್ಬ ಅದಮ'
ಇನ್ನಾರಲ್ಲೋ ಉಸುರಿರುವ 'ನಾನೊಬ್ಬ ಮೂರ್ಖ ಶಿಖಾಮಣಿ'ಯೆಂದು
ಇನ್ನು ಏನೇನೊ ಜನರ ಭಾವಗಳು
ಎಲ್ಲವನೂ ಕಂತೆ ಮಾಡಿ
ನನ್ನತ್ತ ತೂರಿರುವ,
ನಿಜಜೀವನ ರಂಗದ ಮಜಲೊಂದನು
ಇಲ್ಲೇ ಪರಿಚಯಿಸಿರುವ
ನನಗರಿಯದ ಜಗದ ಬಾಗಿಲನು
ತೋರಿರುವ
ತಾನೆತ್ತಲೂ ಸುಳಿಯದೇ
ಧೀಮಂತನಂತೆ ಕೂತಿರುವ
ದಾರಿಗಾರರಿಗೆ ಅಡ್ಡಲಾಗದೆ
ಸುಮ್ಮನಿದ್ದವರ ಮುಂದೆ ದೂಡದೆ
ತಾನೊಬ್ಬ ತಾಳ್ಮೆ ತಳೆದು ನಗುತಿರುವ
ಅವನೇ ನಮ್ಮ ನರೇಶ.
ಕಾಲದರಿವೇ ಗುರು!!
ಕಾಲ ತಾನ್ ಕಾಲಿಕ್ಕಿ
ಕಾಲ್ಗವುಚಿದನೆಲ್ಲ ಕಲಗಚ್ಚ
ಮಾಡಿ ಮುನ್ನಡೆಯುತಿರೆ
ಮಗುವೊ? ಮಂಗವೋ?
ನೀನೊಂದೂ ತಿಳಿಯದೆ
ಅರಳಿದ ಕಣ್
ಕೆರಳಿದ ಕಿವಿಮಾಡಿ
ಭ್ರಾಂತಿಯೊಳಗೆ ಬೆಚ್ಚುವುದೇನ್
ತರವಲ್ಲ ತಗಿ
ಕಾಲ ತಾನ್ ಥೇರನೇರಿ
ಧೂಳಿಕ್ಕಿ ತಾನ್ ಧೀಮಂತನಂತೆ
ಬರುತಿರೆ ಬೆದರಿ ಚದುರಿದ
ಅಂಬೆಗರುವಂತೆ
ಗ್ರಹಣ ಬಡಿದು ಕಲ್ಲೋಲಗೊಂಡ
ಕಡಲಂತೆ ಚಡಪಡುವಯೇನ್
ಒಡಮಾಡು ಸನ್ನದ್ಧನಾಗು
ಕಾಲದೂರಿಗೊಂದೇ ಕಾಲ್ದಾರಿ
ಗುರು ಗುರಿಗಳಿಲ್ಲದೆ
ತಾನೇ ಗುರುವಾಗಿ
ತನ್ನತ್ತ ಸೆಳೆಯುತಲಿಹುದು ನಿನ್ನ
ಅದರೊಳಗೆ ಹುದುಗಿಹೋಗುವ
ಮುನ್ನ ಸಾಧಿಸುವೆಯೇನ್!?
ಕಾಲದರಿವೇ ಗುರು!!!
ಶುಕ್ರವಾರ, ಅಕ್ಟೋಬರ್ 6, 2017
ನಾವು ಗಟ್ಟಿಗರಾಗದ ಹೊರತು ಭಾಷೆ ಉಳಿಸುವುದು ಅಸಾಧ್ಯ
ಸೋಮವಾರ, ಅಕ್ಟೋಬರ್ 2, 2017
ಲಾಲ್ ಬಹದ್ದೂರ್ ಶಾಸ್ತ್ರಿ - ಅಪ್ರತಿಮ ನಿಷ್ಠಾವಂತ
ಮಂಗಳವಾರ, ಸೆಪ್ಟೆಂಬರ್ 19, 2017
ಒಡಮಾಡು ಇನ್ನೊಂದಕೆ
ಬೈದೊಳ್ ಭಕ್ತಿ
ಚೀರಿದೊಳ್ ಭಕ್ತಿ
ಶಪಿಸಿದೊಳೂ ಭಕ್ತಿ
ಭಕ್ತಿಯೇ ಅಲ್ಲೆಲ್ಲ ಏಕತ್ರ ಶಕ್ತಿ
ದುಃಖದೊರ್ ದುಃಖದೊಳ್
ನಕ್ಕಿದೊಳ್ ದುಃಖ
ಬಿಕ್ಕಿದೊಳ್ ದುಃಖ
ಅಳುವೊಳ್ ದುಃಖ
ಗೊಣಗಿ ಗೊಡವಿದೊಳೆಲ್ಲ
ದುಃಖವೇ ದುಃಖ
ದಾರಿಗಾರ ನೀ ದಾರಿಯೊಳ್
ನಡೆದೋದಷ್ಟೆ ದಾರಿಗಾರ
ಪರಂತು ನಿಶ್ಯೇಷ ಜೀವನ
ಅದರೊಳಗೆ ನಿನಗೆ
ಗುರುವಿರನು ಗುರಿಯಿರದು
ನಿರರ್ಥವದು ಮುರುಟದನು
ಮೊದಲಾಗಿ ಒಡಮಾಡು
ಇನ್ನೊಂದಕೆ ಅಲ್ಲೇನು
ಬಲವಿಹುದೋ ಬಲ್ಲವರ್ಯಾರು
ಶನಿವಾರ, ಆಗಸ್ಟ್ 26, 2017
ನದಿಗಳಿಗಾಗಿ ಜಾಥಾ ಭಾರತದ ಈಗಿನ ಅವಶ್ಯಕತೆ
![]() |
| ಬರಿದಾಗಿ ಬತ್ತಿರುವ ಕಾವೇರಿ, ಮಹದೇಶ್ವರ ಬೆಟ್ಟದ ಹತ್ತಿರವಿರುವ ಕರ್ನಾಟಕ ತಮಿಳುನಾಡು ಗಡಿಯಲ್ಲಿನ ದೃಶ್ಯ |
ಮನುಷ್ಯನ ಜೀವನಕ್ಕೆ ನೀರು ಅತೀ ಅವಶ್ಯಕವಾದ ಕಾರಣ ಮನುಷ್ಯನ ಬದುಕು ನದಿ ಸಾಮಿಪ್ಯದಲ್ಲೇ ಆರಂಭವಾಯಿತು. ದಿನಗಳು ಕಳೆದಂತೆ ಹಳ್ಳಿಗಳು ನಗರಗಳಾಗಿ ಮನುಷ್ಯನ ನಾಗರೀಕತೆಯು ಹೊಸ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಇವತ್ತಿನ ಮಟ್ಟಿಗೆ ಬಂದು ನಿಂತಿದೆ. ಆದರೆ ಮನುಷ್ಯ ತಾನು ಬೆಳೆಯುವ ಭರದಲ್ಲಿ ಕಡೆಗಣಿಸಿದ್ದು ಮಾತ್ರ ನದಿಗಳನ್ನು. ಭಾರತದ ಸಂಸ್ಕೃತಿಯಲ್ಲಂತೂ ನದಿಗಳಿಗೆ ವಿಶೇಷ ಸ್ಥಾನ, ಬೇರೆಲ್ಲೂ ನಡೆಯದ ನದಿಯ ಆರತಿ ನಡೆಯುವುದು ಭಾರತ ಉಪಖಂಡದಲ್ಲಿ ಮಾತ್ರ. ನದಿಗೆ ದೇವರ ಸ್ಥಾನ ಕೊಟ್ಟ ಕೆಲವೇ ಕೆಲವು ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿಗೆ ಅಗ್ರ ಸ್ಥಾನ. ಇಂತಿರುವ ಭಾರತದ ನದಿಗಳು ಇಂದು ಏನಾಗಿವೆ, ಏನಾಗುತ್ತಿವೆ ಎನ್ನುವ ಅರಿವು ಬರೀ ಸರ್ಕಾರಕ್ಕಿದ್ದರೆ ಸಾಲದು, ಜನ ಸಾಮಾನ್ಯರಲ್ಲೂ ವ್ಯಕ್ತವಾಗಬೇಕು ಎನ್ನುವ ಅಭಿಲಾಷೆಯಿಂದಲೇ 'ಈಶಾ' ಸಂಸ್ಥೆಯ ಸಂಸ್ಥಾಪಕ ಹಾಗು ದಾರ್ಶನಿಕ ಸದ್ಗುರು ಜಗ್ಗಿ ವಾಸುದೇವ್ 'ನದಿಗಳಿಗಾಗಿ ಜಾಥಾ(ರ್ಯಾಲಿ ಫಾರ್ ರಿವರ್ಸ್)' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕನ್ಯಾಕುಮಾರಿಯಿಂದ ಹಿಡಿದು ಹಿಮಾಚಲದ ವರೆವಿಗೂ ರ್ಯಾಲಿ ಹೊರಡಲಿದೆ. ಮಾರ್ಗದಲ್ಲಿನ ಹದಿನಾರೂ ರಾಜ್ಯಗಳು ಈ ರ್ಯಾಲಿಗೆ ಕೈಜೋಡಿಸಿದ್ದು ಅಸಂಖ್ಯಾತ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಹೊಸದೊಂದು ಯೋಜನೆ ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಸಲುವಾಗಿ ಜಾಥಾ ನಡೆಯುತ್ತಿದ್ದು ನೀರು ಬಳಸುವ ಸರ್ವರೂ ಈ ಜಾಥಾ ದಲ್ಲಿ ಪಾಲ್ಗೊಳ್ಳುವಂತೆ ಘೋಷಣೆ ಹೊರಡಿಸಲಾಗಿದೆ.
![]() |
| ನದಿಯ ಇಕ್ಕೆಲಗಳಲ್ಲಿ ಒಂದು ಕಿಲೋಮೀಟರ್ ವರೆವಿಗೂ ಕಾಡು ಬೆಳೆಸುವ ಮಾದರಿ ಪ್ರಾತ್ಯಕ್ಷಿಕೆ |
ಮಂಗಳವಾರ, ಆಗಸ್ಟ್ 22, 2017
ಎಡವಿದವರು - ಕೆಡವಿದವರು
ದಾಳಿ ದಾರ್ಷ್ಟ್ರ್ಯಗಳೊಳಗೆ ಕೆಡವದವರಿಲ್ಲ
ಎಡವಿದವರೇಳಲು ಎದ್ದವರೆಡವಲು
ಬಾಳೊಂದು ಬೀಳ್ಗಲ್ಲು ಬಿದ್ದೇಳಿ ಮಾಮೂಲು
ಬಿದ್ದವರೊಡನಾಡಿ ಪಾರುಗಾರ ಪರಮಾತ್ಮ
ಕಟ್ಟಿದುದ ಕೆಡವಲು ಕೆಡವಿದುದ ಕಟ್ಟಿ
ನಿಲುಹಲು ಇರುವ ಗೊಡವೆಯೇ ಬೇಡದೆ
ಯಾವನೋ ಕಟ್ಟಿಗಾಣಿಸಿದ ಪಂಜಿನರಮನೆಯೊಳಾಡುವನು
ಒಲೆ ಮುಂದಲ ಶೂರ ಅರಸೊತ್ತಿಗೆ ಭಿತ್ತಿಗಳ
ಮುಂದಲ ಮಹಾರಾಜಾ
ಆರಾರು ಕಟ್ಟಿ ಆರಾರು ಕೆಡವುದೀ ಬಾಳೊಂದು
ಕಟ್ಟಿ ಕಡಿದುರುಳಿಸುವ ಬೀಳ್ಗಲ್ಲು ಕಡೆಗಲ್ಲು
ಅರಿಮೆಯಿಕ್ಕಳ ಗುರಿಯಿಕ್ಕಿ ತಾ ತಗೆದಿದುದೇನು
ತಡಕದರೊಳಗೆ ಬಾಳ್ಗೇನು ಹಿರಿಮೆ
ಬಾಳ್ಕಟ್ಟಲು ವಾಡಗೆಯ ಭೋಗವೀ ದೇಹ
ಬಾಳ್ಕೆಡವಲು ವೀರನೆಂಬ ಅಂಕಿತವೇಕೆ
ಅರಿಮೆಯ ಗುರು ಹೃದಯದೊಳಿದ್ದು
ಕೆಡಲ್ಗೊಡುವುದೇ
ಆ ಅರಿಮೆಯೇ ಗುರು...ಆ ಗುರುವೇ
ಭುವಿಯೂರ ದೈವ
ಮೆಚ್ಚಿದನು ಪೆಚ್ಚದೆ ಕಡು ಸತ್ಯ
ಕೊನೆಯೊಳಗೆ ಪೆಚ್ಚುಗಾರ ನೀನಲ್ಲ
ಬೆಳಗಿಸೊಮ್ಮೆ ಅರಿಮೆಯ ಅಂತರಾತ್ಮವ
ಬಟಾ ಬಯಲು ನಿನ್ನೀ ಹೃದಯದಲಿ
ಮಂಗಳವಾರ, ಆಗಸ್ಟ್ 15, 2017
ಸ್ವತಂತ್ರ ಭಾರತಕ್ಕೆ ತುಂಬಿತು ಎಪ್ಪತ್ತು
ಅದು ಇಪ್ಪತ್ತನೇ ಶತಮಾನದ ಆದಿಭಾಗ. ದಕ್ಷಿಣ ಏಷ್ಯಾ ಬ್ರಿಟಿಷರ ಆಡಳಿತಕ್ಕೆ ಸಿಕ್ಕು ಅಕ್ಷರಶಃ ನಲುಗಿತ್ತು. ಈ ನೆಲದ್ದಲ್ಲದ ಸಂಸ್ಕೃತಿ, ಭಾಷೆ, ಆಚಾರ, ಆಡಳಿತಗಳನ್ನು ಯುರೋಪ್ ಖಂಡದಿಂದ ಈ ನೆಲಕ್ಕೆ ಸರಬರಾಜು ಮಾಡಿದ್ದೂ ಅಲ್ಲದೆ ಇಲ್ಲಿನ ಜನಗಳ ತಲೆಗೆ ಬಲವಂತವಾಗಿ ತುಂಬಿದ್ದರು ಬ್ರಿಟೀಷರು. ಇಲ್ಲಿನ ಮೂಲ ತತ್ವಗಳನ್ನು, ಮೂಲಭೂತ ಅಂಶಗಳನ್ನೆಲ್ಲ ದಿಕ್ಕರಿಸಿ ಪರಕೀಯರ ಆಡಳಿತೆಯೊಳಗೆ ಬಲವಂತವಾಗಿ ದೂಡಿದರೆ ಯಾರಿಗೆ ತಾನೇ ಸ್ವಾಭಿಮಾನ ಕುಂದುವುದಿಲ್ಲ. ಭಾರತದೊಳಗೂ ಅದೇ ಆಯಿತು, ಪರಕೀಯರ ಆಡಳಿತದ ವಿರುದ್ಧ ದನಿಗಳು ಒಂದೊಂದೇ ಬಲಗೊಳ್ಳತೊಡಗಿದಾಗ ಅವುಗಳನ್ನು ದಮನ ಮಾಡಲು ಅಷ್ಟೇ ಲಘುಬಗೆಯಿಂದ ಆಡಳಿತ ಪಾಳಯದಲ್ಲಿ ತಯಾರಿಗಳು ಸದ್ದಿಲ್ಲದೇ ನಡೆಯುತ್ತಲೇ ಇದ್ದವು. ವಿರುದ್ಧ ದನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳುವುದು ಇಲ್ಲವೇ ಗುಂಡಿಟ್ಟು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿರುತ್ತಿದ್ದಾಗ ದೇಶದ ಎಷ್ಟೋ ಜನ ತಬ್ಬಲಿಗಳಾಗಿಹೋದರು.ಅಸಂಖ್ಯಾತ ತಾಯಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು, ಎಷ್ಟೋ ವೃದ್ಧರು ಆಸರೆಯಿಲ್ಲದೆ ಬೀದಿ ಹೆಣಗಳಾದರು, ಎಷ್ಟೋ ಮಕ್ಕಳು ದಿಕ್ಕಿಲ್ಲದೆ ಬೀದಿಯಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಭವಿಷ್ಯವನ್ನೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆಹುತಿಯಾಗಿಸಿಬಿಟ್ಟರು. ಇವೆಲ್ಲಾ ಈ ದೇಶದ ಜನಗಳು ಸವೆಸಿದ ಅಹಿತಕರ ದಿನಗಳು, ಅದಕ್ಕೆ ಕಾರಣ "ನಾವು ಚೆನ್ನಾಗಿದ್ದರೆ ಸಾಕು"ಎಂಬ ಸ್ವಾರ್ಥವಲ್ಲ ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ಸ್ವತಂತ್ರ್ಯ ಲೋಕದಲ್ಲಿ ವಿಹರಿಸುವ ಭಾಗ್ಯವನ್ನು ಕರುಣಿಸುವ ಸಲುವಾಗಿಯೇ ಎಂಬುದನ್ನು ಈ ಕಾಲದ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.
ಭಾರತ ಸೀಮೆಯೊಳಗೆ ಆಡಳಿತದಲ್ಲಿ ಸ್ವತಂತ್ರ ಕೋರಿ ಎದ್ದ ದಂಗೆ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ ಪರಿ ಎಂತಹುದೆಂದರೆ ಎರಡನೇ ಮಹಾಯುದ್ಧದಲ್ಲಿ ಕೈ ಸುಟ್ಟುಕೊಂಡ ಸಂಧರ್ಭದಲ್ಲಿಯೇ ಭಾರತವನ್ನು ಬಿಟ್ಟು ಹೊರಡಬೇಕಾದ ಸಂದಿಗ್ದತೆಗೆ ಸಿಲುಕಿಕೊಂಡ ಸೂರ್ಯ ಮುಳುಗದ ದೇಶದ ದೊರೆಗಳು ಅದನ್ನೊಂದು ನುಂಗಲಾರದ ತುತ್ತಾಗಿಯೇ ಪರಿಗಣಿಸಿದರು. ಇದಾದ ನಂತರದಲ್ಲಿ ಆ ದೇಶ ಸೋಲುಗಳ ಸರಮಾಲೆಯನ್ನು ತನ್ನ ಕೊರಳಿಗೆ ಸುತ್ತಿಕೊಳ್ಳುತ್ತಲೇ ಹೋಯಿತು ಅಥವಾ ಅಲ್ಲಿ ಹೇಳಿಕೊಳ್ಳುವಂತಹ ಯಾವ ಬೆಳವಣಿಗೆಗಳು ಕಾಣಲಿಲ್ಲ.
ನಮ್ಮ ನಿಜವಾದ ಆಧುನಿಕ ತಾಪತ್ರಯಗಳು ಶುರುವಾಗಿದ್ದೇ ಅಲ್ಲಿಂದ, ಸ್ವತಂತ್ರ್ಯ ಭಾರತದಲ್ಲೇ ನಾವು ನಿಂತು ಕಟ್ಟಿದ ಸರ್ಕಾರವೇ ಇರುತ್ತದೆ ಹಾಗಾಗಿ ಬದುಕು ಮತ್ತಷ್ಟು ಸುಲಾಭವಾಗಲಿಕ್ಕೆ ಸಾಕು ಎನ್ನುವ ಆಗಿನ ಹಿರಿಯರ ಯೋಚನೆ/ಯೋಜನೆಗಳಿಗೆ ಮೂಲಾಧಾರವಾಗಿದ್ದ ಗತ ವೈಭವದ ಭಾರತ ಇನ್ನಿಲ್ಲವಾಗಿತ್ತು. ಕಣ್ಮುಂದೆ ತೊಂದರೆಗಳ ಪರ್ವತವೊಂದು ಧುತ್ತನೆ ಎದುರಾಗಿ 'ಏರು ನನ್ನನ್ನು' ಎಂದು ಸವಾಲೆಸೆದು ನಿಂತಂತೆಯೇ ಇತ್ತು. ಪುರಾತನ ಭಾರತ ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡಿದ್ದ ವ್ಯಾಪಾರ, ಶಿಕ್ಷಣ, ವಿಜ್ಞಾನದ ಗಾಢವಾದ ಸಂಬಂಧಗಳನ್ನು ಕಡಿದುಕೊಂಡು ನಡುಮಧ್ಯದಲ್ಲಿ ಕಡುವೈರಿ ಪಾಕಿಸ್ತಾನವೆಂಬ ದೇಶವೊಂದನ್ನು ಕಟ್ಟಿದ್ದು ನಮ್ಮ ದೇಶದ ಸಾಂಪ್ರದಾಯಿಕ ವ್ಯಾಪಾರ ಶೈಲಿಗೆ ಧಕ್ಕೆಯಾಗಿ ಈ ದೇಶದ ಪೂರ್ವಕಾಲದ ಆರ್ಥಿಕ ಶೈಲಿಗೆ ಆಘಾತವಾಗಿತ್ತು. ಆಧುನಿಕ ವ್ಯಾಪಾರ ಮಾರ್ಗಗಳನ್ನು ಹುಡುಕಲೇ ಬೇಕಾದ ಅನಿವಾರ್ಯತೆಗೆ ಒಗ್ಗಿಕೊಂಡ ಭಾರತ ಅದನ್ನು ಸುಲಲಿತವಾಗಿ ನಿಭಾಯಿಸುವಲ್ಲೂ ಯಶಸ್ವಿಯಾಯಿತು. ಭೂಮಾರ್ಗವಲ್ಲದೆ ಜಲಮಾರ್ಗವನ್ನು ಅವಲಂಬಿಸಿ ಆ ಮೂಲಕ ಯಥೇಚ್ಛ ವ್ಯಾಪಾರಗಳಿಗೆ ಒಗ್ಗುವುದು ಅದರ ಜೊತೆ ಜೊತೆಗೆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಧುನಿಕವಾಗಿ ಶೋಧಿಸಿದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕವೂ ಆಗಷ್ಟೇ ಶುರುವಾಗಿದ್ದ ಕೈಗಾರಿಕಾ ಕ್ರಾಂತಿಯಲ್ಲೂ ತನ್ನ ಪಾಲು ದಾಖಲಿಸುವ ಉತ್ಕಟ ಬಯಕೆಯಿಂದ ಭಾರತ ಸರ್ವ ರಂಗಗಳಲ್ಲೂ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಹೋಯಿತು.
![]() |
| ಕೋಟಿ ಕೋಟಿ ಭಾರತೀಯರ ಕನಸು ನನಸಾದ ದಿನದ ಪತ್ರಿಕೆಯಿದು, ವಿಷಾದವೆಂದರೆ ಈ ಸುದ್ದಿ ಇಲ್ಲಿ ಅಚ್ಚಾಗಲು ಲಕ್ಷಾಂತರ ಭಾರತೀಯರ ನೆತ್ತರು ಹರಿದಿದೆ |
![]() |
| ಬ್ರಿಟಿಷ್ ರಾಣಿಯನ್ನು ಎಳೆಯಬೇಕಾಗಿದ್ದು ಕುದುರೆಗಳು, ಆದರೂ ಇದನ್ನೊಮ್ಮೆ ನೋಡಿ |
ಭರತ ಖಂಡದಿಂದ ತುಂಡರಿಸಿಕೊಂಡು ಬೇರೆ ದೇಶಗಳೆಂಬ ಪಟ್ಟ ಕಟ್ಟಿಕೊಂಡ ಹಲವು ದೇಶಗಳು ಭಯೋತ್ಪಾದನೆ, ಬಡತನ ಮತ್ತಿತರ ಬಿರುದುಗಳನ್ನು ತನ್ನೊಳಗೆ ಸೇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಸುಕಾಗುತ್ತಿವೆ. ಆದರೆ ಭಾರತ ಮಾತ್ರ ತನ್ನನ್ನು ತೊರೆದು ಹೋದ ಬ್ರಿಟಿಷ್ ಸಾಮ್ರಾಜ್ಯವೇ ಬಾಯಿಯ ಮೇಲೆ ಬೆರಳಿಟ್ಟು ನೋಡುವಂತೆ ಬೆಳೆದು ನಿಲ್ಲುತ್ತಿದೆ. ೧೯೪೭ರ ಆಗಸ್ಟ್ ೧೫ರೆಂದು ಭಾರತದಿಂದ ಹೊರಡುವ ಮೊದಲು ದೆಹಲಿಯ ಬ್ರಿಟಿಷ್ ಅಧಿಕಾರಿಯೊಬ್ಬ ಹೇಳಿದನಂತೆ "ಇದಾಗಿ ಮುಂದೆ ಅಸ್ತಿತ್ವಕ್ಕೆ ಬರಲಿರುವ ಪಾಕಿಸ್ತಾನ ಹಾಗು ಹಿಂದುಸ್ತಾನ ಗಳೆರಡರಲ್ಲಿಯೂ ಪಾಕಿಸ್ತಾನವೇ ಬಹುಬೇಗ ಅಭಿವೃದ್ಧಿ ದಾಖಲಿಸಲಿದೆ, ಕಾರಣ ಪಾಕಿಸ್ತಾನದಲ್ಲಿರುವುದು ಒಂದೇ ಧರ್ಮ ಅದನ್ನು ಬಿಟ್ಟು ಅವರಿಗೆ ಬೇರೆ ಜಾತಿ ಪಂಥಗಳಿಲ್ಲ. ಹೀಗಿರುವ ದೇಶ ಐಕ್ಯತೆ ಸಾಧಿಸುವುದು ಬಹಳ ಸುಲಭ ಆದ ಕಾರಣ ಆ ದೇಶ ಬಹು ಬೇಗ ಪ್ರಗತಿ ಸಾಧಿಸಲಿದೆ". ಒಂದು ದೃಷ್ಟಿ ಕೋನದಲ್ಲಿ ಬ್ರಿಟಿಷ್ ಅಧಿಕಾರಿ ಹೇಳಿದ್ದು ಸರಿಯಿರಬಹುದು. ಆದರೂ ಪ್ರಪಂಚದಲ್ಲೆಲ್ಲೂ ಇರದಷ್ಟು ವಿವಿಧತೆಯನ್ನು ತನ್ನೊಡಲೊಳಗೆ ತುಂಬಿಕೊಂಡು ಜಗತ್ತಿಗೆ ಗುರುವಾಗಿ ಬೆಳೆದು ನಿಂತಿರುವ ಭಾರತ ಇಂದು ನಿಜಕ್ಕೂ ಆ ಬ್ರಿಟಿಷ್ ಅಧಿಕಾರಿಯ ಮಾತು ಸುಳ್ಳು ಮಾಡಿಬಿಟ್ಟಿದೆ. ಭಾರತ ಧೃಡವಾಗಿ ಬೆಳೆದು ನಿಂತ ಶೈಲಿ ನೋಡಿ ಬ್ರಿಟಿಷರೇ ಇಂದು ನಾಚಿಕೆ ಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ್ಯ ಭಾರತದ ಮುಂದಿನ ಹಾದಿಯೂ ಹೂವಿನ ಹಾಸಿಗೆಯಾಗಿರಲಿಲ್ಲ. ಕಬ್ಬಿನ ರಸವನ್ನೆಲ್ಲ ತೆಗೆದು ಬರಿಯ ಸಿಪ್ಪೆಯನ್ನು ಬಿಸಾಡಿದಂತೆ ಬ್ರಿಟಿಷರು ಇಲ್ಲಿನ ಸಂಪತ್ತು, ಸಿರಿವಂತಿಕೆಗಳನ್ನೆಲ್ಲ ದೋಚಿ ಪಶ್ಚಿಮದ ಖಜಾನೆಯೊಳಗೆ ಪೇರಿಸಿಕೊಂಡು ಬಿಟ್ಟರು.
ಶನಿವಾರ, ಆಗಸ್ಟ್ 5, 2017
ಜಗ - ಹುಡುಕು ತಾಣ
ಶನಿವಾರ, ಜುಲೈ 8, 2017
ನಾವು ನಾವು ಅರಿತರೆ ಮಾತ್ರ ತಾಯಿ ಭಾರತಿ
ವೀಣಾಪಾಣಿ
ಇಣುಕೊಮ್ಮೆ ನಮ್ಮ
ಹಟ್ಟಿ, ಓಣಿ ದಾರದಂಗಳಿಗೆ
ಕೊರಗುತಿಹರು, ಸೊರಗುತಿಹರು
ತಾಯಿ ಭಾರತೀಯ
ನಲ್ಮೆಯ ಕುಡಿಗಳು.
ವಿಲಾಸಕ್ಕೊಲಿದ ಧನಲಕ್ಷ್ಮೀ
ಒಲಿಯಿಲ್ಲಿ ನಮ್ಮ ತನು
ಮನಗಳಿಗೊಂದಿಷ್ಟು
ಉಲ್ಲಾಸ ತಂದೆರಚು
ನಾವು ಕುಂತು
ಉಣ್ಣುವೆವು ಕೆಲವು ದಿನ.
ಭೋಗ ಭಾಗ್ಯಕೊಲಿದ
ದೇವೇಂದ್ರ ಕಳಿಸು
ನಿನ್ನ ಗುಮಾಸ್ತರ
ಉಣ್ಣಲು ಉಡಲು
ಇಲ್ಲದ ನಮ್ಮ ಕೇರಿ
ಜನಗಳೊಡನೊಮ್ಮೆ
ಮಾತನಾಡಿಸು
ತೀರಿಗೆರಡು ಮಾರಿಗೊಂದು
ದೇವರುಗಳ ಕಡೆದು
ಕೂರಿಸಿದ್ದೇವೆ
ನಮಗಿಲ್ಲವಾದರೂ
ದೇವರನ್ನು ಸಲುಹಿಬಿಟ್ಟಿದ್ದೇವೆ
ಈಗಿದೇನು ಏನು
ನಿಮ್ಮ ಹಠ
ಬನ್ನಿ ಎಲ್ಲರೂ ಇಳಿದು
ಇಲ್ಲೊಮ್ಮೆ ನೋಡಿ
ಧರ್ಮಗಳು ಕತ್ತಿ
ಕೊಡಲಿಗಳ ಹಿಡಿದು
ನಿಂತಿವೆ. ಜಾತಿಗಳು
ಜುಟ್ಟು, ಜನಿವಾರಗಳಲ್ಲಿ
ಅಡಗಿ ಹೋಗಿವೆ
ಆಳುಗರು ಜಾತಿಗಳ
ಹೊಸ ಸೂತ್ರಧಾರರು,
ಹೆಸರೊಳಗೆ ಮಾತ್ರ
ಪ್ರಜೆಗಳು ಪ್ರಭುಗಳು
ದಿಟದಲಿ ಅವರೆಲ್ಲ
ಆಳಿಸಿಕೊಳ್ಳುವ
ಹಂಬಲದವರು
ಒಗ್ಗಟ್ಟಿನೊಳಗೆ ನಾವು ನಾವು
ಸಲಹಿಕೊಂಡರೆ ಮಾತ್ರ ದೇಶ
ನಾವು ನಾವು ಅರಿತರೆ
ಮಾತ್ರ ತಾಯಿ ಭಾರತಿ
ಆಳುಗರ ಕೈಗೆ ಜುಟ್ಟು
ಕೊಟ್ಟರೆ ನಮಗೆ ದೇವರೇ ಗತಿ!.
ನಮೋ ಇಸ್ರೇಲ್ ಭೇಟಿ - ಭಾರತದಲ್ಲಿ ಕುಡಿಯುವ ನೀರಿನ ಬವಣೆ ಹಿಂಗಬಹುದೇ?
ಅಲ್ಲಿಯವರೆಗೂ ಕಾವೇರಿ ಸಮಸ್ಯೆಗೆ ಶಾಶ್ವವಾತ ಪರಿಹಾರವೆಂದರೆ ನದಿ ಜೋಡಣೆ ಮಾತ್ರ ಹಾಗು ಅದು ಅಧಿಕ ಖರ್ಚಿನ ವ್ಯವಹಾರವಾದ್ದರಿಂದ ಅದರ ಅನುಷ್ಠಾನ ಕಷ್ಟ ಸಾಧ್ಯವೆಂದೇ ನಂಬಿಕೊಂಡಿದ್ದ ಕಾವೇರಿ ಕೊಳ್ಳದ ಜನಗಳಿಗೆ ಹೊಸ ವಿಚಾರ ಹೊಳೆದಿದ್ದು ಆಗಲೇ. ಅಂದು ಆ ಸಭೆಯಲ್ಲಿ ಮಾತನಾಡುತ್ತ ಸುಬ್ರಮಣಿಯನ್ ಸ್ವಾಮಿ ಇಸ್ರೇಲ್ ನ ವಿಚಾರವನ್ನು ಪ್ರಸ್ತಾಪಿಸಿದ್ದರು. ದೇಶದೊಳಗೆ ಅತೀ ಕಡಿಮೆ ನದಿಗಳನ್ನು ಹೊಂದಿ ಹಾಗು ಅತೀ ಕಡಿಮೆ ಮಳೆಯಾಗುವ ಪ್ರದೇಶಗಳನ್ನು ಹೊಂದಿರುವ ಇಸ್ರೇಲ್ ನೀರಿಗಾಗಿ ಹಾಹಾಕಾರವೆಬ್ಬಿಸದೇ ಸಮುದ್ರದ ನೀರನ್ನೇ ಶುದ್ಧೀಕರಿಸಿ ಕೃಷಿ ಕಾರಣಕ್ಕೂ ಹಾಗು ಕುಡಿಯುವ ಅನುಕೂಲಕ್ಕಾಗಿಯೂ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಂದು ನಾವೆಲ್ಲಾ ಅದನ್ನು ಕೇಳಿದ್ದೆವು ಆದರೆ ಮೊನ್ನೆ ಮೋದಿ- ಬೆಂಝಮೀನ್ ನೆತನ್ಯಾಹು ಭೇಟಿಯಲ್ಲಿ ಸಮುದ್ರ ತೀರವೊಂದಕ್ಕೆ ಭೇಟಿ ಕೊಟ್ಟ ಉಭಯ ನಾಯಕರು ಅಲ್ಲಿಯೇ ಇದ್ದ ನೀರು ಶುದ್ಧೀಕರಣ ಯಂತ್ರವೊಂದರ ಮೂಲಕ ಸಮುದ್ರ ನೀರನ್ನು ಶುದ್ಧೀಕರಿಸಿ ಅಲ್ಲಿಯೇ 'ಚೀರ್ಸ್' ಎಂದು ಕುಡಿಯುತ್ತಿದ್ದುದನ್ನು ಸರಿಸುಮಾರು ಭಾರತದ ಎಲ್ಲಾ ಮಾಧ್ಯಮಗಳು ವರದಿ ಮಾಡಿವೆ. ಇದಾದ ನಂತರ ಭಾರತ-ಇಸ್ರೇಲ್ ಒಡಗೂಡಿ ಭಾರತೀಯ ಸೇನೆ, ಕೃಷಿ, ನೀರಾವರಿ ಮುಂತಾದ ವಿಚಾರಗಳ ಬಗ್ಗೆ ಒಪ್ಪಂದ ಮಾಡಿಕೊಂಡವು. ಇದನ್ನು ಕಂಡು ನೀರಿನ ಸಮಸ್ಯೆಯೆದುರಿಸುತ್ತಿರುವ ಮಂದಿಗೆ ಬಹಳ ಖುಷಿಯಾಗಿರಲಿಕ್ಕೆ ಸಾಕು, ಅದರಲ್ಲೂ ದಕ್ಷಿಣ ಭಾರತದ ಹೈದ್ರಾಬಾದ್ ಕರ್ನಾಟಕ ಪ್ರಾಂತ, ಮುಂಬೈ ಕರ್ನಾಟಕ ಪ್ರಾಂತ, ಕಾವೇರಿ ಕೊಳ್ಳವಾದ ಕರ್ನಾಟಕ-ತಮಿಳುನಾಡಿನ ಹಲವಾರು ಜಿಲ್ಲೆಗಳು ಇಂತಹ ವ್ಯವಸ್ಥೆಯನ್ನು ತಮ್ಮಲ್ಲೂ ಅನುಷ್ಠಾನಗೊಳಿಸಿದರೆ ಹೇಗಿರುತ್ತದೆ ಎನ್ನುವ ಯೋಚನೆಗೆ ಹಾರಿರುವುದಕ್ಕೆ ಸಾಕು.
7000 ಕಿಲೋಮೀಟರ್ ಗೂ ಮೀರಿ ಸಮುದ್ರ ತೀರ ಹೊಂದಿರುವ ಹಾಗು 130 ಕೋಟಿಗೂ ಅಧಿಕ ಜನ ಸಂಖ್ಯೆಯುಳ್ಳ ಭಾರತ ಸಮುದ್ರ ನೀರಿನ ಶುದ್ಧೀಕರಣದ ಕಡೆ ಇದುವರೆಗೂ ಗಮನ ಕೊಡದಿರುವುದೇ ವಿಪರ್ಯಾಸ. ಭಾರತದ ಕೃಷಿ ಮಾನ್ಸೂನ್ ನೊಂದಿಗಿನ ಜೂಜಾಟ ಎನ್ನುವುದು ನಮಗೂ ನಿಮಗೂ ಗೊತ್ತಿರುವ ಸಮಾಚಾರವೇ. ಹಾಗೆಯೇ ಹಿಮಾಲಯದ ತಪ್ಪಲಿನ ನದಿಗಳನ್ನು ಹೊರತು ಪಡಿಸಿದರೆ ಭಾರತದ ಇನ್ನೆಲ್ಲ ನದಿಗಳೂ ಮಳೆಯಾಧಾರಿತ ಎನ್ನವುದು ತಿಳಿದಿರುವ ಸಂಗತಿಯೇ. ಜಾಗತಿಕ ಹಾಗು ವೈಜ್ಞಾನಿಕ ಕಾರಣಗಳಿಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುದು ಇದೀಗ ಗೌಪ್ಯ ವಿಚಾರವಲ್ಲ. ಹೀಗಿರುವಾಗ ಇಸ್ರೇಲ್ ನೀರಿನ ಶುದ್ಧೀಕರಣದಂತಹ ಹೊಸ ತಂತ್ರಜ್ಞಾನ ಬಳಸಿಕೊಂಡು ಭಾರತ ಹೊಸ ಭಾಷ್ಯ ಬರೆಯುವುದು ಅನಿವಾರ್ಯವಾಗಿದೆ. ಬರ ಪರಿಸ್ಥಿತಿ ನಿರ್ವಹಣೆಗೆಂದು ಪ್ರತೀ ಬರಗಾಲದಲ್ಲೂ ದೆಹಲಿ ಕದ ತಟ್ಟುವ ಕರ್ನಾಟಕ-ತಮಿಳುನಾಡಿನ ರಾಜಕಾರಣಿಗಳಿಗೆ ಈಗಲಾದರೂ ದೇವರು ಇಂತಹ ತಂತ್ರಜ್ಞಾನಗಳತ್ತ ಮನಸ್ಸು ಹರಿಸುವ ಶಕ್ತಿ ಕೊಡಲಿ.
ಭಾನುವಾರ, ಜೂನ್ 25, 2017
ಭುವಿಗೂ ಮುಗಿಲಿಗೂ ಮಾತು - ಮಳೆ
ಬಯಕೆಗಳ ಮುಗಿಲಿಗೆ
ಒಯ್ಯುವ ಪಣವಾಗಿ
ನೀರ ನೆಪ ಮಾಡಿ
ಇಬ್ಬನಿ, ಆವಿ, ಮಂಜು,
ಮಂಗಾಳಗಳ ಕಡೆದು
ಗುಟ್ಟಾಗಿ ಕಳಿಸುತಿದೆ.
ಭುವಿಯ ಭಾವವರಿತ
ಮುಗಿಲು ತಾನೆಲ್ಲರಿಗೂ
ಮುಂದಾಳು, ಮಿಗಿಲಾಳು,
ದೊಡ್ದಾಳು, ಕಟ್ಟಾಳು,
ಭಯವೇಕೆಂದು ಬಗೆದು
ತನ್ನ ಭಾವ ಬದುಕುಗಳನ್ನೆಲ್ಲ
ಬೆಸೆದು ಮಳೆಯಾಗಿ ಸುರಿಸುತಿದೆ.
ತನ್ನ ಭಾವಕೆ ಸ್ಪಂದನೆ
ತನ್ನ ನೋವಿಗೆ ಸಾಂತ್ವನ
ತನ್ನ ಜೀವಕೆ ಜೊತೆಗಾರನ
ಬೆಂಬಲ ಕಂಡು ಭುವಿ
ಮನಸು ಉಲ್ಲಾಸಿತವಾಗಿ
ಸುಕೋಮಲ ಸುವಾಸನೆ ಸುಯ್ಯುತಿದೆ
ನಿರಾಳತೆ ಎದ್ದೆದ್ದು ಕಾಣುತಿದೆ.
ಆ ನಿರಾಳತೆ ಇಲ್ಲಿರುವ
ಜೀವಗಳ ಪೊರೆಯುತಿದೆ
ಅಲ್ಲಿ ನಡೆಯುವ ಸಂವಹನ
ಇಲ್ಲಿನ ಬದುಕಿಗೆ ಆಧಾರವಾಗಿದೆ
ಅಲ್ಲಿಂದ ಘಟಿಸುವ ಸರ್ವವೂ
ನಮ್ಮ ಒಳಿತಿಗಾಗಿಯೇ
ಭುವಿಯ ಮಕ್ಕಳಲ್ಲವೇ ನಾವು.
ಭಾನುವಾರ, ಮೇ 28, 2017
ಜ್ಞಾನ ಗಂಗೆ
ಉದಿಸಿದ್ದೆಲ್ಲಿ
ಪರ್ಯಾವಸಾನವೆಲ್ಲಿ ಯಾವೊಂದು
ತಿಳಿಯದ, ತಿಳಿಸದ
ಆದ್ಯಂತ್ಯವಿಲ್ಲದ ಹರಿವದು
ಆದ್ಯಂತ್ಯ ಕಂಡಿರುವುದು
ಹರಿವ ಗಂಗೆಯಲ್ಲ
ಮೊಗೆವ ಕೈ
ಹಿಗ್ಗುವ ಬಾಯ್
ಮೀಯುವ ಮೈ
ಗೆಲುವೇ ಗೆಲುವೇ
ನಿನಗಾಗಿ ನಾಲ್ಕುಗೋಡೆಗಳ ಮಧ್ಯೆ
ದುಡಿಯುವೆ ನಾನು
ನಿನಗಾಗಿ ಶ್ರದ್ಧೆ ಭಕ್ತಿಗಳನ್ನು
ಪಣವಾಗಿಡುವೆ ನಾನು
ಜಗಮಗಿಸುವ ಬೆಳಕಿನ ಚಿತ್ತಾರದ
ವೇದಿಕೆಯೊಳಗೆ ಅಪ್ಪು ಬಾ ನನ್ನ
ಸಾವಿರಾರು ಜನರ ಹಾರೈಕೆ
ಅದಕೆ ಆಧಾರವಾಗಲಿ
ಅವರ ಚಪ್ಪಾಳೆ ಅದಕೆ ಸಾಕ್ಷಿಯಾಗಲಿ
ಅದರೊಳಗೆ ನಾನೆಂಬುದು
ಬರಿ ನೆಪವಾಗಲಿ.
ಏನು ಬೇಕು ನಿನಗೆ
ಏನ ಬಯಸುವೆ ನೀನು
ಯಾರನಪ್ಪುವೆ ನೀನು
ಯಾರನು ಇಡಾಡುವೆ ನೀನು
ಬಿಡು ಇದೊಂದು ಗುಟ್ಟನು
ನನ್ನೊಡನೆ
ನೀನೆಳೆದ ಪರಿಧಿಯೊಳಗೆ
ನೀನೆಣಿಸುವ ರೀತಿಯಲೆ ಸುತ್ತುವೆ
ನನ್ನೊಮ್ಮೆ ಅಪ್ಪು ಬಾ
ನಿನ್ನಪ್ಪುಗೆಯಲ್ಲಿ ಸಿಹಿ ಸುಖ ಕಂಡವರೆಷ್ಟು?
ಕೆಲವರಷ್ಟೇ
ಕೊನೆಯ ಬರಹ
ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ
ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...
-
ದೇಹವನ್ನು ದಂಡಿಸದೆ ಕಾಯವನು ಖಂಡಿಸದೆ ಉಂಡುಂಡು ತೇಗುವರೆಲ್ಲಾ ಕೈಲಾಸಕೆ ಪೋದೊಡೆ ಅದನೇನು ರಂಡೆಯಾಳುವಳೆ ಸರ್ವಜ್ಞ. ಮೇಲಿನ ಸರ್ವಜ್ಞ ಮೂರ್ತಿಯ ವಚನ ಬೊಟ್ಟು ಮಾಡುತ್...
-
" ಹುಟ್ಟಿದ ಮಕ್ಕಳೆಲ್ಲ ವಿಶ್ವ ಮಾನವರಾಗಿಯೇ ಹುಟ್ಟುತ್ತಾರೆ ಆದರೆ ಬೆಳೆ ಬೆಳೆಯುತ್ತಾ ಅವರನ್ನು ಅಲ್ಪ ಮಾನವರನ್ನಾಗಿಸಲಾಗುತ್ತದೆ. ಅಲ್ಪ ಮಾನವನಾದವನನ್ನು ಮತ್ತೆ ವಿ...
-
ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ. ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ...





