ಸೋಮವಾರ, ನವೆಂಬರ್ 21, 2016

ಮೋದಿ - ಮಂತ್ರವಾದಿ

ಪಿಶಾಚಿ ಮೆಟ್ಟಿ ಕುಣಿಯುವರ ಬಾಯ್ಬಿಡಿಸಬಹುದು
ಗರ ಬಡಿದವರ ಬಾಯ್ಬಿಡಿಸಬಹುದು
ಸಿರಿಗರ ಬಡಿದವರ ಬಾಯ್ಬಿಡಿಸಲು ಬಡವನೆಂಬ ಮಂತ್ರವಾದಿಯೊಬ್ಬನಿಗೆ
ಸುಲಭ ಸಾಧ್ಯ ಅಂದೊಪ್ಪಿದರು ವಚನ ಮಾರ್ಗದವರು.
ಶತಮಾನದ ಸಾಲು ಸಾಲುಗಳು ಕಳೆದರು ಸಿರಿಗರ ಬಿಡಿಸುವರ
ಮಂತ್ರವಾದಿಯ ಪಟ್ಟವ ಬಡತನ ತನ್ನದಾಗಿಸಿಕೊಂಡಿತ್ತು.
ನೋಡೀಗ ಇಲ್ಲಿ, ನಮ್ಮದೇ ಭಾರತದೊಳಗೆ ಮೋದಿಯೆಂಬ
ಮಂತ್ರವಾದಿ ಬೇವಿನ ಸೊಪ್ಪು, ಮೆಣಸಿನ ಘಾಟು ಏನೇನೂ ಇಲ್ಲದೆ ಸಿರಿಗರ
ಬಡಿದವರ ಬಾಯ್ಬಿಡಿಸಿದ್ದಾರೆ, ಮನೆಯಿಂದ ಓಡೋಡಿ ಬ್ಯಾಂಕಿನ ಸರದಿಯಲ್ಲಿರುವಂತೆ
ಮಾಡಿದ್ದಾರೆ, ಬ್ಯಾಂಕಿನ ಮಿತಿಯನ್ನೂ ಮೀರಿಸಿ ಹಣದ ಹೊಳೆಗೆ ಒಡ್ಡುಗಟ್ಟಿ
ತಮ್ಮ ಮನೆಯೊಳಗೆ ತಿರುವಿಕೊಂಡವೆರೆಲ್ಲಾ ಇದೀಗ ಮೋದಿಯೆಂಬ ಮಂತ್ರವಾದಿಗೆ
ಶಾಪ ಹಾಕುತ್ತ ತಮ್ಮ ಮನೆಯ ಮಹಾಲಕ್ಷ್ಮಿಯನ್ನು ಗೌರವಾದರದಿಂದ ಕಳುಹಿಸಿಕೊಡುತ್ತಿದ್ದಾರೆ.
ದೇಶದೊಳಗಣ ದೊಡ್ಡ ಲಕ್ಷ್ಮಿಯರು ತಮ್ಮ ಬೆಲೆ ಕಳೆದುಕೊಂಡು ಬ್ಯಾಂಕಿಗೆ ಸೇರುವ
ಬದಲು ಗಂಗೆಗೂ, ಸಮುದ್ರಕ್ಕೂ, ರೋಡಿಗೂ, ಕಾಡಿಗೂ ಸೇರಿಕೊಂಡು ಇಲ್ಲದವರ
ಪಾಲಾಗಿ ಮತ್ತೆ ಮೋದಿಯೆಡೆಗೆ ದಾರಿ ಹಿಡಿದಿದ್ದಾರೆ.
ಅಂತೂ ಇಂತೂ ಮೋದಿಯಣ್ಣ ಸಿರಿಗರ ಬಡಿದವರ ನುಡಿಸಿದರು, ಏನೆಂದು ಗೊತ್ತೇ
'ಮುಂದಿನ ಲೋಕಸಭೆಯೊಳಗೆ ನಾವು ಕೇಸರಿಗೆ ವಿರೋಧ'ವೆಂದು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...