ಭಾನುವಾರ, ಮಾರ್ಚ್ 26, 2017

ಅಮೃತ ಪುತ್ರ

ಭಾವದ ಕಡಲಿಗೆ ಬಲೆ ಬೀಸಿ
ಸೆಳೆದರೆ ಸಿಗುವುದೇನು ?
ಮೂರನುಭವದ ಮಾತು
ನೂರು ಭಾವ ಧಾರೆ
ಯಾರ್ಯಾರದೋ ಮಾತು
ಇನ್ಯಾರದೋ ಬೈಗುಳ
ಅವಮಾನ, ಅನುಮಾನಗಳ ಆಡಂಬರ
ಹಿಂಸೆ ನೋವುಗಳರಮನೆಯೊಳಗಣ
ದಿನಗಳ ನೆನೆಯುವುದೂ ದುರ್ಭರ

ಯಾವುದತಿಯಾದರೂ ಕಷ್ಟ
ಯಾವುದು ಮಿತಿಯಲ್ಲಿದ್ದರೂ ಕಷ್ಟ
ಏನೀ ಜೀವನ ಇಷ್ಟೊಂದು ವಿಶಿಷ್ಟ
ಒಮ್ಮೊಮ್ಮೆ ಬಡತನದ ಬೆಂಗಾಡು
ಮಗದೊಮ್ಮೆ ಕಾಂಚಾಣೆಯ ಆರಾಧನೆ
ಇನೊಮ್ಮೆ ಆರು ಮೂರುಗಳಾವು ಅಲ್ಲದ ಬೇನೆ
ಬದುಕು ಏರಿಳಿತಗಳ ತಂದೊಡ್ಡಿದರೂ
ತಡೆದು ನಿಂತವನೇ ಸಾಧಕ
ಹೆದರಿ ಓಡಿದವನ ಬಾಳಿಗದು ಮಾರಕ

ಸೋಲುವರು ಸೋಲುವುದು
ಮನದ ಹಿಂತೆಗೆತದಿ
ಗೆಲ್ಲುವರು ಗೆಲ್ಲುವುದು
ಮನದ ಇಂಗಿತದಿ
ಸೋಲು ಗೆಲುವುಗಳೆರಡರಲ್ಲೂ
ಸಮತನವ ಕಾಣುವನೇ ನಿಜವಾದ
ನಾಯಕ ಬಾಳ ದೋಣಿಯಲ್ಲೂ
ಹಿಡಿದ ಕಾರ್ಯದಲ್ಲೂ ನಿಜ
ನಾಯಕ - ನಿಜ ಅಮೃತ ಪುತ್ರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟವರ ಸಾಹಸಗಾಥೆ

ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...