ಭಾನುವಾರ, ಜೂನ್ 25, 2017

ಭುವಿಗೂ ಮುಗಿಲಿಗೂ ಮಾತು - ಮಳೆ

ಭುವಿ ತಾನು ಮನದ
ಬಯಕೆಗಳ ಮುಗಿಲಿಗೆ
ಒಯ್ಯುವ ಪಣವಾಗಿ
ನೀರ ನೆಪ ಮಾಡಿ
ಇಬ್ಬನಿ, ಆವಿ, ಮಂಜು,
ಮಂಗಾಳಗಳ ಕಡೆದು
ಗುಟ್ಟಾಗಿ ಕಳಿಸುತಿದೆ.

ಭುವಿಯ ಭಾವವರಿತ
ಮುಗಿಲು ತಾನೆಲ್ಲರಿಗೂ
ಮುಂದಾಳು, ಮಿಗಿಲಾಳು,
ದೊಡ್ದಾಳು, ಕಟ್ಟಾಳು,
ಭಯವೇಕೆಂದು ಬಗೆದು
ತನ್ನ ಭಾವ ಬದುಕುಗಳನ್ನೆಲ್ಲ
ಬೆಸೆದು ಮಳೆಯಾಗಿ ಸುರಿಸುತಿದೆ.

ತನ್ನ ಭಾವಕೆ ಸ್ಪಂದನೆ
ತನ್ನ ನೋವಿಗೆ ಸಾಂತ್ವನ
ತನ್ನ ಜೀವಕೆ ಜೊತೆಗಾರನ
ಬೆಂಬಲ ಕಂಡು ಭುವಿ
ಮನಸು ಉಲ್ಲಾಸಿತವಾಗಿ
ಸುಕೋಮಲ ಸುವಾಸನೆ ಸುಯ್ಯುತಿದೆ
ನಿರಾಳತೆ ಎದ್ದೆದ್ದು ಕಾಣುತಿದೆ.

ಆ ನಿರಾಳತೆ ಇಲ್ಲಿರುವ
ಜೀವಗಳ ಪೊರೆಯುತಿದೆ
ಅಲ್ಲಿ ನಡೆಯುವ ಸಂವಹನ
ಇಲ್ಲಿನ ಬದುಕಿಗೆ ಆಧಾರವಾಗಿದೆ
ಅಲ್ಲಿಂದ ಘಟಿಸುವ ಸರ್ವವೂ
ನಮ್ಮ ಒಳಿತಿಗಾಗಿಯೇ
ಭುವಿಯ ಮಕ್ಕಳಲ್ಲವೇ ನಾವು.

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...