ಬುಧವಾರ, ಮಾರ್ಚ್ 27, 2019

ಬೀಚಿಯವರ ನಗೆ-ತತ್ವ ಚಟಾಕಿಗಳು


  • ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ.
  • ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ಎಂದು ಹೆಸರು.
  • ಒಬ್ಬನಿಗೆ ಹದಿನಾಲ್ಕು ಮಕ್ಕಳಿದ್ದರೆ ಮೊತ್ತ ಮೊದಲನೆಯವನಿಗೆ ಕಟ್ಟ ಕಡೆಯವನು ದೂರದ ಸಂಬಂಧಿ.. ಹೌದೋ? ಅಲ್ಲವೋ ?
  • ಮನೆ ನಿಂತಿರುವುದು ಮಡದಿಯ ಮೇಲೆ, ಅಕಸ್ಮಾತ್ ಅದು ಬಿದ್ದರೆ ಗಂಡನ ತಲೆಯ ಮೇಲೆ!!.
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ವಾರದಲ್ಲಿ ಮೂರು ದಿನಾವಾದರೂ ನಗುತ್ತಾ ಇರಿ. ಇವತ್ತು, ನೆನ್ನೆ ಹಾಗು ನಾಳೆ.
  • ಆ ಭಗವಂತ ಮೋಸ ಮಾಡುವ ಹೆಂಗಸರನ್ನು ಸೃಷ್ಟಿಸಿಯೇ ಇಲ್ಲ. ಆದರೆ ಮೋಸ ಹೋಗುವ ಗಂಡಸರನ್ನು ಮಾತ್ರ ಸೃಷ್ಟಿಸಿದ್ದಾನೆ.
  • ಬಾಳಿನಲ್ಲಿ ಏನಿಲ್ಲ? .. ಕೊಲ್ಲಲು ವಿಷವಿದೆ, ಬದುಕಿಸಲು ಔಷಧವೂ ಇದೆ. ಔಷಧದಲೂ ವಿಷವಿದೆ. ಇದುವೇ ಜೀವನ.
  • ಗೆಳೆಯನನ್ನು ಉಪ್ಪಿನಂತೆ ಬಳಸಬೇಕೇ ವಿನಾ ಸಕ್ಕರೆಯಂತೆ ಸುರುವಿಕೊಳ್ಳಬಾರದು.
  • ಜೀವನೋಪಾಯಕ್ಕಾಗಿ ಅಲ್ಲದೆ ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ 'ಹವ್ಯಾಸ'ಗಳು.
  • ಕೆಲಸವಿಲ್ಲದೇ ಸುಮ್ಮನೆ ಕುಳಿತವನ ಭುಜದ ಮೇಲೆ ಶನಿಯು ಬಂದು ಕೂರುತ್ತಾನೆ.
  • ಉತ್ತಮ ಸಾಹಿತಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಕಸದ ಬುಟ್ಟಿ.
  • ಬದುಕಿದ್ದಾಗ ತಂದೆ ತಾಯಿಗೆ ನೀರು ಕೊಡದವನು, ಸತ್ತ ಮೇಲೆ ಧಾರಾಳವಾಗಿ ಬೆಂಕಿ  ಇಡುತ್ತಾನೆ.
  • ಎಮ್ಮೆ ತಿರುಗಾಡಿ ಮೇಯುತ್ತದೆ, MLA ಕುಳಿತಲ್ಲೇ ಮೇಯುತ್ತಾನೆ.
  • ಮಾತುಗಳನ್ನು ಎಣಿಸಿ ನೋಡಬಾರದು, ತೂಕ ಮಾಡಿ ನೋಡಬೇಕು.
  • ಡಾಕ್ಟರರ ಸುತ್ತಲೂ ರೋಗಿಗಳೇ ಇರುವಂತೆ, ಒಳ್ಳೆಯವರ ಸುತ್ತಲೂ ಕೆಟ್ಟವರೇ ಇರುತ್ತಾರೆ.
  • ಬಾಳಿನ ವ್ಯಾಕರಣ - ಹೆಣ್ಣು : ಪದ್ಯ, ಗಂಡು : ಗದ್ಯ, ಮಕ್ಕಳು : ರಗಳೆ.
  • ಸುಳ್ಳನ್ನಾಡುವ ನೂರಾರು ಗೆಳೆಯರಿರುತ್ತಾರೆ, ಸತ್ಯವನ್ನಾಡುವ ಸಾವಿರಾರು ಶತ್ರುಗಳಿರುತ್ತಾರೆ.
  • ಹಸಿವು ಚೆನ್ನಾಗಿದ್ದರೆ ಊಟ ಚೆನ್ನಾಗಿಯೇ ಇರುತ್ತದೆ.
  • ಸಾವಿನ ಬಗ್ಗೆ ಎಚ್ಚರಿಸಲು ವರ್ಷಕ್ಕೊಮ್ಮೆ ಕಾಲರಾಯನು ಗಂಟೆ ಬಾರಿಸುವ ದಿನವೇ ಜನ್ಮ ದಿನ.
  • ಬಳಸಿದಂತೆಲ್ಲ ಬೆಳೆಯುವ ಅಕ್ಷಯ ಪಾತ್ರೆ ನಗು.
  • ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ, ಗಂಡನ ಒಳ್ಳೆ ಗುಣ ಹೆಂಡತಿಗೆ ಕಾಣುವುದಿಲ್ಲ.
  • ಮಾವನ ಮನೆ ಸೇರುವ ಗಂಡು, ಗಂಡನ ಮನೆಗೆ ಬಾರದ ಹೆಣ್ಣು ಇಬ್ಬರೂ ಭೂಮಿಗೆ ಭಾರ.
  • ಹಲವಾರು ಹೆಚ್ಚು ಕಷ್ಟ ಪಟ್ಟು ಉಣ್ಣುತ್ತಾರೆ, ಕೆಲವರು ಹೆಚ್ಚು  ಉಂಡು ಕಷ್ಟ ಪಡುತ್ತಾರೆ.
  • ಸತ್ಯವನು ಅರಿತವನು ಸತ್ತಂತೆ ಇರಬೇಕು.
  • ನಗು ದೇವ ಭಾಷೆ, ಅಳು ಪಿಶಾಚಿ ಭಾಷೆ.
  • ಮಗುವಿಗೆ ಅಳು, ಹೆಣ್ಣಿಗೆ ನಗು, ಅವಿವೇಕಿಗೆ ಧೈರ್ಯ, ಅಪ್ರಾಮಾಣಿಕನಿಗೆ ರಾಜಕಾರಣ ಅತ್ಯುತ್ತಮ ಆಯುಧಗಳು.
  • ಹೆಂಡವಿದು ಜಗವು, ಮಿತವಾಗಿ ಕುಡಿಯಿದನು.



-0-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...