ಭಾನುವಾರ, ಮಾರ್ಚ್ 3, 2019

ಹಾಡಿರಿಂದು ಇತಿ ಶ್ರೀ

ಅನ್ನವಿಕ್ಕಲು, ನೀರ ಕುಡಿಸಲು
ಜಾತಿ ಧರ್ಮ ಜಾಡು ಹಿಡಿದ
ಮನುವ ಮನಸ್ಥಿತಿಗೆ
ಹಾಡಿರಿಂದು ಇತಿ ಶ್ರೀ.

ಯೋಗ್ಯವಾಗಿ ಬದುಕಿ ಬಾಳಿ
ಸಾಂಗವಾಗಿ ಪರರ ಸಿರಿತನಕೆ
ತೆರೆದ ಬಾಯ್ಗೆ
ಹಾಡಿರಿಂದು ಇತಿ ಶ್ರೀ.

ತನ್ನದೇನು ನೋಡದಂದು
ಅನ್ಯದವರ ಗುಣ ಮರ್ಯಾದೆಗಳ
ಅಳೆದು ತೂಗೋ ರಾಗಕಿನ್ನು
ಹಾಡಿರಿಂದು ಇತಿ ಶ್ರೀ.

ಪರರ ಹೆಣ್ಣು , ಹೊನ್ನು ಕಂಡು
ಬಾಯಿ ತೆರೆದು ಶ್ವಾನದಂತೆ
ಅಲೆವ ಧೋರಣೆಗಿನ್ನು
ಹಾಡಿರಿಂದು ಇತಿಶ್ರೀ.

ದೇವರನ್ನು ನೆಚ್ಚಿಕೊಂಡು
ಡಂಭ, ಪುಂಡರ ಪೊರೆವ
ಮೂಢತನದ ಭಕ್ತಿಗಿನ್ನು
ಹಾಡಿರಿಂದು ಇತಿ ಶ್ರೀ.

ನಾನು, ನನ್ನದೆಲ್ಲವೆಂದು
ಮೆಚ್ಚಿನಿಂದ ಗಚ್ಚಿ ಹಿಡಿದು
ಬಿಡದ ಮನೆವಾರ್ತೆಗಿನ್ನು
ಹಾಡಿರಿಂದು ಇತಿ ಶ್ರೀ.

ಅನ್ಯರೊಳಗೆ ಕೂಡಿಕೊಂಡು
ತನ್ನದೆಲ್ಲ ಹಿಂದು  ಮಾಡಿ
ತನ್ನವರನು ಮುಂದು ಮಾಡೋ
ಗುಣದ ಪಥಕೆ
ಒಗ್ಗುವಂತ ಕೀರ್ತಿ ಬೆಳೆಸಿ
ಯೋಗಿಯಂತೆ ಬಾಳ್ಮೆ ನಡೆಸಿ
ತೂಕದಿಂದ ಕೂಡಿಕೊಂಡ ಬಾಳ್ಮೆಯದಕೆ
ಹಾಡಿರೊಮ್ಮೆ ಇತಿ ಶ್ರೀ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...