ಶುಕ್ರವಾರ, ಫೆಬ್ರವರಿ 23, 2018

ವಿಧಿಗೆ ಬಿದಿಗೆಯಿದು

ಜನರಿಲ್ಲ ನಿನಗೆ, ಬಾದ್ಯನಾಗು
ಅನುರಾಗಕೆ ಕೊರತೆಯಿಲ್ಲಿ
ಅನುರಾಗಿಯಾಗು,
ಸಾಧನಗೆ ಹಿನ್ನಡೆಯಿಲ್ಲಿ
ಸಾಧಿಸು,
ಕುಹಕ ಮನಸುಗಳ ಹಜಾರವಿದು
ಸುಮನಸ್ಕನಾಗು

ಕುಟಿಲ ಕರ್ಮಿಗಳ ಕಾರಸ್ಥಾನವಿದು
ಕುಗ್ಗದಿರು
ಉಪಮೆ ಮಹೋಪಮೆಗಳ ಮಜಲಿದು
ಉಪಾಸಿಸು
ಸುಶ್ರಾವ್ಯ ಗೀತೆಯಿದು
ಬಜಾಯಿಸು
ಗರ್ವ ಪರ್ವಗಳ ಸಡಗರವಿದು
ಪ್ರವರ್ತಿಸು

ಬಡಾಯಿಗಳ ಬಜಾರಿದು
ಸದ್ದು ಗದ್ದಲವಿರದೆ ಸುಮ್ಮನಿರು
ಶ್ರೇಷ್ಟಿಗಳ ಸಮೂಹವಿದು
ಶ್ರೇಷ್ಟನಾಗು
ಬದುಕೊಂದು ಪಯಣ
ಪಯಣಿಸು
ವಿಧಿಗೆ ತದಿಗೆಯಿದು
ಕಥೆ ಮುಗಿಸು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...