ಭಾನುವಾರ, ಆಗಸ್ಟ್ 16, 2020

ಅಲ್ಲೇ ಇದೆ ನಿನ್ನ ಗೆಲುವು

 ಇಲ್ಲೆಷ್ಟೋ ಜನಗಳಿಗೆ

ಉಣ್ಣಲಿಲ್ಲ,

ಮಗದೆಷ್ಟೋ ಜನಗಳಿಗೆ 

ಉಡಲಿಲ್ಲ,

ಇಲ್ಲೆಷ್ಟೆಷ್ಟೋ ಜನಗಳಿಗೆ 

ಎಲ್ಲರ ಸಮದಾರಿಗೆ ನಿಲ್ಲುವ 

ಸ್ಥೈರ್ಯವೇ ಇಲ್ಲ.


ಅದೆಂತಾಯ್ತೋ ತಾನೇ ತಾನಾಗಿ 

ಅರಸಿ ಬಂದಿದೆ ನಿನಗೀ ಭೋಗ.

ಬಿಡು ಚಿಂತೆಯ 

ಬಾಹ್ಯದ ಜಗದ ಜಾಗರವ,

ಅರಿ ನಿನ್ನ ಬಾಳ್ಬಲವ

ಅಲ್ಲೇ ಇದೆ ನಿನ್ನ ಗೆಲುವು.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...