ಭಾನುವಾರ, ಅಕ್ಟೋಬರ್ 11, 2020

ಜೀವನಕ್ಕೊಂದು ಚಿಕ್ಕ ಪಾಠ

 ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಅನ್ನುವುದನ್ನು ಅಳೆಯುವದಕ್ಕಾಗಿ ನಾವಿಲ್ಲಿಗೆ ಬಂದಿಲ್ಲ. ಬಂದಿರುವುದೆಲ್ಲಾ ಯಾವುದೋ ಮಹತ್ಕಾರ್ಯವೊಂದನ್ನು ಮಾಡುವುದಕ್ಕಾಗಿ, ಆ ಕಾರ್ಯಕ್ಕೆ ಸಾಕ್ಷೀಭೂತರಾಗಿ ನಿಲ್ಲುವುದಕ್ಕಾಗಿ. ಮಹತ್ಕಾರ್ಯ ನಮ್ಮಿಂದ ಸಾಗದಿದ್ದರೆ ಮಹತ್ಕಾರ್ಯ ಮಾಡುವ ಯಾವ ಮಹನೀಯನಿಗಾದರು ಹೆಗಲು ಕೊಟ್ಟಾದರೂ ನಿಂತು ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವದರೊಳಗೆ ವರ್ಣನಾತೀತ ಆನಂದವೊಂದಿದೆ. ಹಾಗಾಗಿ ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು, ಅವರೇನೋ ಮಾಡುತ್ತಿದ್ದಾರೆ ನಾವು ಬೇಗೆ ಹೊತ್ತಿ ಉರಿಯುವುದು ಅವಶ್ಯಕವಲ್ಲ, ತರವೂ ಅಲ್ಲ. ಮಾಡಬೇಕಾಗಿರುವ ಕಾರ್ಯಗಳು ಅನೇಕ ನಮ್ಮ ಮುಂದೆ ಇವೆ.

ಅತ್ತ ಗಮನ ಹರಿಸಿ ಎಲ್ಲೆಲ್ಲಿ ತನ್ನ ಯಾವ್ಯಾವ ಶಕ್ತಿಯನ್ನು ಉಪಯೋಗಿಸಿ ನಾವು ಗೆಲ್ಲಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿರುವುದು ನಮಗೆ ಮಾತ್ರ. ಆದ ಕಾರಣ ಅದನ್ನನುಸರಿಸಿ ನಡೆದು ಗೆಲುವಿನ ಮಾರ್ಗ ತಲುಪುದು ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯವಾಗುತ್ತದೆ. 




-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...