ಭಾನುವಾರ, ಜನವರಿ 3, 2021

ವಿವೇಕ ವಾಣಿ

  • ಆಗಿ ಹೋದುದರ ಕುರಿತು ಚಿಂತಿಸಿ ಫಲವೂ, ಪ್ರಯೋಜನವೂ ಏನೂ ಇಲ್ಲ.
  • ನಮ್ಮ ಈವತ್ತಿನ ಪರಿಸ್ಥಿತಿಗೆ ನಾವು ಮಾತ್ರ ಕಾರಣರೇ ಹೊರತು ಮತ್ತಿನ್ನಾರು ಅಲ್ಲ.
  • ನಾವು ಸೇರಬೇಕಾದ ಗಮ್ಯ ನಮ್ಮ ತಾಕತ್ತಿನ ಮೇಲೆ ನಿರ್ಧರಿಸಿಕೊಳ್ಳಬೇಕೇ ಹೊರತು ಬೇರೆಯವರನ್ನು ನೋಡಿಕೊಂಡಲ್ಲ.
  • ನಿನ್ನನ್ನು ನೀನು ಹೋಲಿಸಿ ನೋಡಿಕೊಳ್ಳುವುದು ನೀನು ಭಗವಂತನಿಗೆ ಮಾಡಬಹುದಾದ ಅತೀ ದೊಡ್ಡ ಅವಮಾನ.
  • ಗೋಳಾಡುವುದಕ್ಕೆ ಕಾಲವಿದಲ್ಲ. ಆಗಬೇಕಾದ ಕಾರ್ಯವನ್ನು ಮಾಡಿ ಮುಗಿಸು, ಉನ್ನತಿಯೆಡೆಗೆ ನೋಡು.
  • ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಳ್ಳುವುದು ಉತ್ತಮ, ಆದರೆ ಅವುಗಳೆಡೆಗೆ ಕಾರ್ಯ ಸಾಧಿಸದಿದ್ದರೆ ಅದೇ ಮಾರಕ.
  • ಗುರಿ ಹಾಕಿಕೊಂಡು ಅದನ್ನು ಸಾಧಿಸದೇ ಒಮ್ಮೆ ಬಿಟ್ಟರೆ ಗುರಿ ಬಿಟ್ಟು ಬಿಡುವುದೇ ಚಟವಾಗಿ ಪರಿಣಮಿಸಿಬಿಡುತ್ತದೆ. 
  • ಸಕಲ ಜವಾಬ್ದಾರಿಯೆಲ್ಲ ನಿನ್ನ ಮೇಲೆಯೇ ಬಿದ್ದಿದೆಯೇನೋ ಎನ್ನುವಂತೆ ದುಡಿ. ಗೆಲುವು ನಿಶ್ಚಿತವಾಗಿ ನಿನ್ನದೇ.
  • ಜೀವನ ಭಗವಂತನ ಪ್ರಶ್ನೆ ಪತ್ರಿಕೆ, ಇಲ್ಲಿ ಒಬ್ಬೊಬ್ಬರಿಗೂ ಬೇರೆ ಬೇರೆ ಪ್ರಶ್ನೆಗಳಿರುವ ಪತ್ರಿಕೆ. ಪಕ್ಕದವನ ಉತ್ತರ ಕಾಪಿ ಹೊಡೆದರೆ ಗುರಿ ಮುಟ್ಟುವುದು ಅಸಾಧ್ಯ.
  • ಕಾರ್ಯಶ್ರದ್ಧೆ ಇದ್ದರೆ ನೀನು ಗುರಿಯನ್ನಲ್ಲ, ಗುರಿಯೇ ನಿನ್ನನ್ನು ಅನ್ವೇಷಿಸುತ್ತದೆ.
  • ಒಳ್ಳೆಯ ಆಲೋಚನೆ ಇರುವೆಡೆ ಸಕಾರ್ಯ ತನ್ನಿಂತಾನೇ ಜರುಗುತ್ತದೆ.
  • ಪ್ರಯತ್ನದಿಂದ ಏನಾದರೂ ಸಾಧನೆ ಸಾಧ್ಯ.

-o-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...