ಶುಕ್ರವಾರ, ಏಪ್ರಿಲ್ 7, 2017

ನೀವು ನೀವು ಕಂಡಂತೆ

ಆರ್ತರ ಗುಂಪಿಗೆ ದೇವರು
ನಾಯಕನಾದರೆ
ಬಲಗೊಳ್ಳುವರ್ಯಾರು?
ಆರ್ತತೆ ಅರ್ಥ ಹೀನವಾಗಿ
ಬಲಗಾರರ ಬಣವಿರದ
ಜಗ ನಡೆಯುವುದೆಂತು?

ಬಲಗಾರನೊಬ್ಬನ ದೃಷ್ಟಿ
ಹೊಸದನ್ನೇನೋ ಸೃಷ್ಟಿಸುವುದು
ಅವನ ಕಟಾಕ್ಷದಲಿ
ಕಲ್ಲು ಶಿಲೆಯಾಗುವುದು
ಮಾತು ಕಾವ್ಯವಾಗುವುದು
ಅನುಭವಗಳೇ ಉಕ್ತಿಗಳಾಗುವವು.

ಬದುಕಿದವರು ಕಂಡಂತೆ
ಬಾಳೊಂದು ಸುಖ ದುಃಖಗಳ ಕಂತೆ
ಬಲದಿಂದ ಕಂಡವರಿಗದು ರಣೋತ್ಸಾಹ
ಗುಣದಿಂದ ಕಂಡವರಿಗದು ಭಾವ ಸಾಗರ
ನೊಂದು ನೋಡಿದವರಿಗೆ ಮುಗಿಯದ ಕಥೆ
ಸದಾ ಕೊರಗುವರಿಗೆ ಇನ್ನಿಲ್ಲದ ವ್ಯಥೆ

ನೀವು ನೀವು ಕಂಡಂತೆ ಬಾಳು
ನೀವು ನೀವು ಬದುಕಿದಂತೆ ಬದುಕು
ನಾವು ಬಯಸಿದ ಮಟ್ಟಿಗೆ ಬಾಳಿಗೆ
ಅರ್ಥವೇನು, ಸಾರವೇನು, ಗುರಿಯೇನು
ಯೋಚಿಸುವ ಕಾಲವಿದಲ್ಲ
ಅದಕ್ಕೆ ಕಾಲ ಮೀಸಲಿಲ್ಲವೂ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...