ಭಾನುವಾರ, ಏಪ್ರಿಲ್ 23, 2017

ಬಂದು ಹೋಗುವ ನಡುವೆ

ಜಗದಂಗಳಕ್ಕೆ ಬರಲು ಆಹ್ವಾನವಿಲ್ಲ
ಅಲ್ಲಿಂದ ನಿರ್ಗಮಿಸಲು ಆಹ್ವಾನವಿಲ್ಲ
ಬಂದು ಹೋಗುವ ನಡುವೆ ಆಹ್ವಾನವಿಲ್ಲದ
ಕೌತುಕಗಳಿಗೆ ನಾವು ಹೋಗುವುದೇ ಇಲ್ಲ

ಇಲ್ಲಿಗೆ ಬರುವಾಗ ಗುರುವಿರಲಿಲ್ಲ
ಇಲ್ಲಿಂದ ಹೋಗುವಾಗ ಗುರಿಯಿರುವುದಿಲ್ಲ
ಬಂದು ಹೋಗುವ ನಡುವೆ ಗುರು, ಗುರಿಗಳಿಗೆ
ನಮ್ಮ ನಾವು ಸಮರ್ಪಿಸಿಕೊಂಡುಬಿಟ್ಟೆವಲ್ಲ!!

ಅಲ್ಲಿಂದ ಬರುವಾಗ ಆಸೆ ಮೋಹಗಳಿರಲಿಲ್ಲ
ಇಲ್ಲಿಂದ ಹೋಗುವಾಗ ಅವುಗಳ ತೊರೆಯಲು ಆಸ್ಪದವೇ ಇಲ್ಲ
ಭುವಿಯ ಮಕ್ಕಳು ನಾವು, ಅದರ ಎರವಲು  ಈ ದೇಹ,
ಹಿಂದಿರುಗಿ ಋಣಮುಕ್ತರಾಗಲು ಭಾದ್ಯರಲ್ಲವೇ ನಾವು

ಹುಟ್ಟು ಅರಿಯದ ಜೀವಿ ಜಗದೊಳಗಿಲ್ಲ
ಮಸಣಕೆ ಬಂಧುಗಳಾಗದ ಜನರು ಇಲ್ಲಿಲ್ಲ
ಹುಟ್ಟು-ಸಾವು ಗಳೊಳಗೆ ಬಡಿದಾಡಿ ಬಸವಳಿದರೂ
ನಿಜ ಸ್ಥಿತಿ ಮನುಜನಿಗರ್ಥವಾಗಲೇ ಇಲ್ಲ!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...