ಶನಿವಾರ, ಮೇ 13, 2017

ಧರ್ಮ ದುರಸ್ತಿ

ಹೆಸರೇನು ನಿನಗೆ
ಕುಲವೇನು ನಿನಗೆ
ಕಾರ್ಯವಾವುದು ನಿನಗೆ
ಕಪಟ ಭಟ್ಟಂಗಿಗಳ ಆಸರೆಯ
ತೆರೆ ಮರೆಯೊಳಗೆ ಮಲಗಿರುವೆಯಾ!?
ಬಾ ಇಲ್ಲಿ ಒಮ್ಮೆ ನೋಡು
ನಿನ್ನಹೆಸರೊಳಗೆ ನೆತ್ತರ ನದಿಯಿಹುದಿಲ್ಲಿ
ನಿನ್ನಕೃಪೆಯ ರುಂಡ ರಾಶಿಯಿಹುದಿಲ್ಲಿ
ನಿನಗಾಗಿ ನೆತ್ತರಬಸಿವ ಮಕ್ಕಳ ನೋವು ನಿನಗೆ ಆಹಾರವೇ ?
ಅವರ ಚೀತ್ಕಾರ ನರಳಾಟಗಳು ನಿನಗೆ ವೇದ ಘೋಷವೇ ?
ಅವರ ಶಾಪ  ನಿನ್ನ ಪಾಲಿಗೆ ವರವೇ?

ಜಗದೊಳಗುದಿಸಿದ ನರ  ಮಾತ್ರರು
ತಮ್ಮ ವಿನಯವಂತಿಕೆ ಸಂಸ್ಕಾರ ಸಂಸ್ಕೃತಿಗಳನ್ನೆಲ್ಲ
ಪೇರಿಸಿ ಕಟ್ಟು ಬಿಗಿದು
ಅದಕೆ ನಿನ್ನಹೆಸರಿನ್ನಿಟ್ಟು
ಗುಡಿ ಗುಂಡಾರಗಳೊಳಗೆ ಕೊಳೆ ಹಾಕಿ
ನಿರಂಕುಶ ಜಗದೊಳಗೆ
ಬೀದಿಗಿಳಿವ ಬಿಡಾಡಿಗಳಾಗಿ
ನಿನ್ನಹೆಸರೊಳಗೆ ನಿತ್ಯ ಸುಲಿಗೆಯುತ್ಸವ
ನಡೆಯುತಿಹುದಿಲ್ಲಿ,
ಮುರಿ ನಿನ್ನ ನಿದ್ರಾ ವ್ರತವ, ಬಾ ಇಲ್ಲಿ ಬೆರೆ ಇಲ್ಲಿ.
ನಿನ್ನಿಂದ ನಡೆದಿಹುದೇನು ನೀನೂ ಅವಗಾಹಿಸು


ನ್ಯಾಯದ ಕಣ್ಣಿಗೆ ಕಪ್ಪನೆಯ ಅರಿವೆ ಸುತ್ತಿದೆ
ದೇವರು ದಿಂಡರುಗಳನೆಲ್ಲ ಗುಡಿಯೊಳಗೆ ಕೂಡಿಸಿ
ದುಡಿವ ಸರಕು ಮಾಡಿದೆ
ಪ್ರಕೃತಿ ತಾನು ನಿಂತು ಕೊಡದ ಭಿನ್ನತೆ ಕೊಟ್ಟೆ
ನೀನು ಹುಟ್ಟಿದ್ದೇ ಸತ್ಯ ಸಂಧತೆಯನ್ನು ಮಾನವನ
ಹೃದಯದೊಳಗೆ ಬೆಳಗಲು
ಆದರೂ ಒಮ್ಮೊಮ್ಮೆ ನನ್ನ ಉಳಿಸಲು ಸುಳ್ಳು
ಹೇಳಿರೆಂದು ನೀನೆ ನುಡಿಸಿದೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...