ಮಂಗಳವಾರ, ಸೆಪ್ಟೆಂಬರ್ 19, 2017

ಒಡಮಾಡು ಇನ್ನೊಂದಕೆ

ಭಕ್ತರ್ ಭಕ್ತಿಯೊಳ್
ಬೈದೊಳ್ ಭಕ್ತಿ
ಚೀರಿದೊಳ್ ಭಕ್ತಿ
ಶಪಿಸಿದೊಳೂ ಭಕ್ತಿ
ಭಕ್ತಿಯೇ ಅಲ್ಲೆಲ್ಲ ಏಕತ್ರ ಶಕ್ತಿ

ದುಃಖದೊರ್ ದುಃಖದೊಳ್
ನಕ್ಕಿದೊಳ್ ದುಃಖ
ಬಿಕ್ಕಿದೊಳ್ ದುಃಖ
ಅಳುವೊಳ್ ದುಃಖ
ಗೊಣಗಿ ಗೊಡವಿದೊಳೆಲ್ಲ
ದುಃಖವೇ ದುಃಖ

ದಾರಿಗಾರ ನೀ ದಾರಿಯೊಳ್ 
ನಡೆದೋದಷ್ಟೆ ದಾರಿಗಾರ
ಪರಂತು ನಿಶ್ಯೇಷ ಜೀವನ
ಅದರೊಳಗೆ ನಿನಗೆ
ಗುರುವಿರನು ಗುರಿಯಿರದು
ನಿರರ್ಥವದು ಮುರುಟದನು
ಮೊದಲಾಗಿ ಒಡಮಾಡು
ಇನ್ನೊಂದಕೆ ಅಲ್ಲೇನು
ಬಲವಿಹುದೋ ಬಲ್ಲವರ್ಯಾರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...