ಗುರುವಾರ, ಜೂನ್ 14, 2018

ಅಮಿತ ಸವಾಲು - 'ಕಾ'ರಂಭ ಪದ್ಯ

ಕನಸದು ಕತ್ತಲಲಿ ಕಾಡುವುದು,
ಕಡೆದೆದ್ದು ಕಂಡರೆ ಕೇವಲ
ಕನವರಿಕೆಯಂತಿಹುದದು,
ಕಣ್ಗೆ ಕಂಡಿದ್ದೆಲ್ಲವ
ಕೊನೆಮೊದಲರಿಯದೇ
ಕೈಗೊಳ್ಳುವ ಕಸರತ್ತು,
ಕೇವಲನಾಗಿ, ಕನಸುಗಾರನಾದ
ಕಷ್ಟ ಕಾರ್ಪಣ್ಯಗಳ ಕಂಡ
ಕರ್ಮಜೀವಿಗಿದು ಕೊಡುಗೆಯೇನು?
ಕೊಡುಗೆಯೋ? ಕರ್ತಾರನ ಕುಯುಕ್ತಿಯೋ?
ಕಂಡವರ್ಯಾರು?.
ಕಾಣದಿದ್ದರೂ ಕುಶಲ ಕರ್ಮಿ ಕರ್ತಾರನವನು.
ಕಂಡಿರೇನು?!!
                  - - * - -
ಕುಚೇಲನಿಗೆ ಕಷ್ಟವಿತ್ತು,,
ಕೃಷ್ಣನಿಗದು ಕಣ್ಸನ್ನೆಯಲ್ಲಿ
ಕಂಡಿತ್ತು,
ಕಷ್ಟದೊಳರಗಿದ ಕಡುಗಷ್ಟವನ್ನರಿತಿದ್ದ
ಕೃಷ್ಣ ಕೇಳದೆಯೇ
ಕೈವಲ್ಯ ಕರುಣಿಸಿದ್ದ. 
ಕಷ್ಟದವರ ಕುಟೀರದೊಳಗುದಿಸಿದ
ಕುವರ ಕುಚೇಲನೆಂಬುವನು
ಕೃಷ್ಣನ ಕುಟೀರದೊಳಗಧಿಪತಿಯಾಗಿದ್ದ
ಕುಚೇಷ್ಟೆಕುಖ್ಯಾತಿಗಳೊಳಗೆ
ಕುಣಿದುಕುಣಿಸಿದವರೆಲ್ಲ 
ಕಾಣದಂತೆ ಕರಗಿ
ಕಣ್ಣರಿವಿನಿಂದ ಕಣ್ಮರೆಯಾದಾಗ್ಯೂ
ಕೃಷ್ಣ ಕೇಳುಗನಾಗಿದ್ದ
ಕುಚೇಲ ಕುದುರಿದ್ದ,
ಕಮರದಂತೆ ಕಡೆದುನಿಂದಿದ್ದ.

ವಿ. ಸೂ: 'ಕ' ಕಾರದಿಂದಲೇ ಪದಗಳು ಪ್ರಾರಂಭವಾಗುವಂತೆ ಪದ್ಯ ಬರೆಯಲು ಸೂಚಿಸಿದ್ದು ಕನ್ನಡ ಸಾಹಿತ್ಯಾಸಕ್ತರಲ್ಲಿ ಓರ್ವರಾದ ಅಮಿತ್ ಜೋಷಿಯವರು. ಆದ್ದರಿಂದಲೇ ತಲೆಬರಹ 'ಅಮಿತ ಸವಾಲು' ಆಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...