ಮಂಗಳವಾರ, ಜೂನ್ 5, 2018

ರಮ್ಯ ವಿಕಾಸ

ಕನ್ನಡ ಪಡುವಣದ ಕಡಲ್ತೀರ

ತೆಂಕಿನ ತುಳುವರ ತಿಟ್ಟು

ಬಡಗದ ಬೇಗೆಯ ಬುಗ್ಗೆ 

ಮೂಡಣಕ್ಕಿಳೆಯಿಕ್ಕಿರುವ ಕಾಲ್ಝರಿ

ಕಣ್ಹಾಯುವ ಸೀಮಾಂತರದ

ಧರಿತ್ರಿಯ ಸೊಬಗು

ಕಾಲ್ನಿಲುಕದ ದೇಹವಣಿಯುವ

ಬಿಂಕದೊಳಾದಂತೆ ತೋರ್ಪ

ತಿಟ್ಟು ಕಣಿವೆ ಕಮರುಗಳು

ಕಿಕ್ಕಿರುದುಕ್ಕಿರುವ ಹರಿದ್ವರ್ಣದ

ನಟ್ಟನಡುವೊಳೊಂದೂರು

ಪುತ್ತೂರು!!!!  

 

ಗತದ ಚಕಿತಗಳೊಳಗೊಮ್ಮೆ

ಬರಡಿದ ಕೆರೆಯಾಳದಲಿ

ಮನುಜರು ತೇಗಿದ ದನಿಯಾನಿಸಿ

ನೀರೊಸರಿತಂತೆ !!

ಏನಿರಬಹುದಲ್ಲಿ??

ಯಃಕಶ್ಚಿತ್ ನಮ್ಮ ಹೃದಯದ

ಮಿಡಿತವರಿಯಿತೇ ಪ್ರಕೃತಿ?

ಹಾಗಿದ್ದೊಡೆ ಇದೇ

ಮಹಾಧರ್ಮಭೂಮಿ

ಮಾನವೀಯತೆ-ಪ್ರಕೃತಿ ಬೆಸೆದು

ಮಿಡಿದ ಮನುಕುಲದ

ಮಹಾ ಯಾಗ ಭೂಮಿ.


ಇತಿ ಮುತ್ತನೆತ್ತಿದ

ಸಹೃದಯದೂರೊಳೊಂದವತಾರವಾಯ್ತು

ರಮ್ಯಮನೋಹಕ ವಾಯಿತ್ತು

ತಾಳ್ಮೆಜಾಣ್ಮೆಹಿರಿಮೆ

ಬೆರೆಸಿ ತ್ರಯವಾಯ್ತು.

 ತ್ರಯ ಆಧುನಿಕತೆಗೆ

ಒಗ್ಗಿತ್ತುಇಲ್ಲೂ

ಅದೇ ಮನಮೋಹಕತೆ

ಅದೇ ವಿಕಾಸದ ಹಾದಿ

ರಮ್ಯವಲ್ಲವೇ  ವಿಕಾಸ !

 

ಬಳಿಸಾರಿದವರೊಡಗಿನವರಿಗೆ

ಇಲ್ಲವೆಂದಿಲ್ಲ,

ಸರಿಯದವರ ಸುದ್ದಿ

ಸಹವಾಸಗಳ ಗೊಡವೆಯಿಲ್ಲ,

ತಾನಾಯಿತ್ತುತನ್ನ ಕೃತಿಯಾಯಿತ್ತು.

ಮಹಾಧರ್ಮ ಭುವಿಯ

ಮಣ್ಣಿನ ಗುಣವದು.

ಮಳೆ ಬಂದು ತಾನ್

ಮಣ್ಣ ಸುಗಂಧ  ಪಸರುವುದು,

ಮಳೆಯ ಮೀರಿದ

ಗಂಧವೊಂದ ತಂದೆಸರಿದ

ಪೆಣ್ಗೇನೆಂದು ಹೆಸರಿಡಬಹುದು

ಹೆಸರೇನಾದರೇನು

ವಿಕಾಸವದು ರಮ್ಯವೇ

ಅಲ್ಲಲ್ಲ!!!

ರಮ್ಯ ವಿಕಾಸ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...