ಸೋಮವಾರ, ಮೇ 28, 2018

ಸುನೀಲನಾಗು ನೀ

ಕಂಡವರಿಗೆ ಎದುರಾಗಿ

ಎದುರವರ ಮನಕೆ ಮುಳುವಾಗಿ

ಮಾತೊಳಗೆ ಯುದ್ಧ ಸನ್ನಿಧಿಗೊಯ್ವ

ಎದುರಾಳಿಗಳೆದೆಯಲಿ

ಹರಿಗತ್ತಿಯಾಗಿ ತೊಯ್ದು

ಮಾತು ಖಡ್ಗವಾಗಿ

ನೋಟ ಕಟುವಾಗಿ

ದೇಹ ಬೃಹದ್ಭಾರವಾಗಿ

ಲೋಕದ ಪರಮಾರ್ಥ

ನಿನಗೇಕೆ ಸುಮ್ಮನಿರು

ಸುನೀಲನಾಗಿ

 

ಮಾತು ಮನದಿಂದತ್ತತ್ತ

ಸುಳಿದು ಸುರಗಂಗೆಯಾಗಲೂ

ಸರಿ

ಬರದೊಳಗ ಝರಿಯಾಗಲೂ

ಸರಿ

ಮುಟ್ಟಿ ಕುಡಿಯಲೊಪ್ಪದ

ಕಡಲುಪ್ಪಾಗಲೂ ಸರಿ

ಮನ ಬಗೆದಂತದು

ತಾನು ತಿಳಿದಂತದು

ನೀನ್ ಹುಟ್ಟಿ ಬೆಳೆದ ಕೇರಿ

ದಾರಿಗಳ ಗುಣವನುಸುರುವುದೀ ಮಾತು

ಬಿಡು ಪರಮಾರ್ಥ ಚಿಂತೆ

ಸುನೀಲನಾಗು ನೀ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...