ಶನಿವಾರ, ಮೇ 19, 2018

ಸೋತವರ ಸೊಡರಲ್ಲಿ

ಸೋತವರ ಸೊಡರಲ್ಲಿ
ಗೆಲುವೆದ್ದು ಬೀಗಿತು
ಮೀಸಲು, ಶೇಷದ
ಹಮ್ಮು ಬಿಮ್ಮುಗಳಿಲ್ಲದಿದ್ದರೂ
ಸೋತವರಿಗೆ ಸಂವಿಧಾನ
ನೆರಳಾಯಿತು.

ಹಿಂದುಳಿದವರ,
ಕೈಲಾಗದವರ,
ಕೆಳ ಸ್ತರದ,
ದೇಶದ ಸರ್ವರ ಹಿತವನೂ
ಕಾಯುವೆನೆಂದೆಂಬ
ದೇಶದ ಮಹಾಗ್ರಂಥ
ಸೋಲ ಸಿಂಹಾಸನಕ್ಕೇರಿಸಿದೆ.

ನೂರು ಸೋಲು ಒಂದೇ
ಗೆಲುವಿನ ಮಹಾ ಮಂತ್ರ
ವೆಂದರೆ ಹೊರತು,
ಸೋತು ಸೋತವರ
ಕೂಟ ಹೆಣೆದರದು
ಗೆಲುವಿನ ಸಿಂಹಾಸನವೇ .

ಸೋಲುವರ ಕೂಟವಿರಲಿ
ಗೆದ್ದವರ ಹಜಾರವಿರಲಿ
ಸೋಲು ಗೆಲುವಿನ
ತಾಳೆಯನೇ ಹಾಕದ
ಮುತ್ಸದ್ದಿಗಳಿರಲಿ
ನಾವು ನಾವು ಗೇಯ್ದರಷ್ಟೇ
ಬದುಕು... ಅದು ಸುವಿಸ್ತಾರ
ಸುವಿಶಾಲ ಸುನೀಲ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...