ಸೋಮವಾರ, ಮೇ 21, 2018

ಯುಗಾಚಾರ್ಯ

ಚಿಕ್ಕಂದಿನಿಂದ ಕಂಡಿದ್ದನವನು

ಸಾತ್ಯಕಿಯನ್ನು ಆದರೇನು

ಸಾತ್ಯಕಿಗೆ ಭೇದಿಸಲಾಗಲಿಲ್ಲ

ಕೃಷ್ಣನ ಮನದಿಂಗಿತ ಅರಿವಾಗಲಿಲ್ಲ

 

ರಣನೀತಿ, ರಾಜ ನೀತಿಯಲಿ

ನೀತ್ಯಾಚಾರ್ಯನವನು

ಸಂಧಾನ, ವಿಶ್ವಾಸಗಳಲಿ

ಯುಗಾಚಾರ್ಯನವನು

 

ಕೈಲಾಗದ ಪಾಂಚಾಲಿಗೆ 

ಕೃಪಾಚಾರ್ಯನವನು

ಕೈಲಾದ ಪಾಂಡವರಿಗೆ

ಧರ್ಮಾಚಾರ್ಯನವನು

 

ಕರೆಯದ ಹೊರತು ಬರದೆ

ನಿಂತನವನು

ವ್ಯಾಕುಲಿಸಿ ಕರೆದೊಡನೆ

ಬಿಡನವನು

 

ಪಗಡೆಯ ದಾಳ ಉರುಳುವ

ಮೊದಲು ಭಿನ್ನಹವಲ್ಲದ 

ಕರೆಬರಲೆಂದು ಬಗೆದನಿವನು  

ಹೊರನಿಂದು ಕಾದನಿವನು

 

ಕರೆಯದು ಬಂತವಗೆ

ಎಂದು? ಎಲ್ಲ ಮುಗಿದೇ

ಹೋಗಿ ಪಾಂಚಾಲಿಯ ಮುಡಿ

ವಸ್ತ್ರ ವೈಭವಗಳೆಲ್ಲ ಕದಡಿ

 

ಧಾರಾಕಾರ ಕಣ್ಣೀರು ತಂದು

ಯಾರು ಏನೂ ಮಾಡದಂದು

ಎಲ್ಲ ಬಲ್ಲವರಾಗರವಾಗಿದ್ದ

ಪಾಂಡವರೈವರ ಗೆದ್ದು ಬೀಗಿದ್ದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...