ಶನಿವಾರ, ನವೆಂಬರ್ 3, 2018

ಸತ್ಯದ ಸರದಿ

ಆಳುಗ ದೊರೆಯೋರ್ವನಿಗೆ
ಕಳಿಂಗದ ರಣಭೂಮಿಯೊಳಗೆ
ಸತ್ಯದ ಸದ್ದರ್ಶನವಾಯ್ತು.
ಕಳಿಂಗದ ನೆತ್ತರ ನದಿ
ಅದಕೆ ಕಾರಣವಾಗಿತ್ತು. (ಸಾಮ್ರಾಟ ಅಶೋಕ)

ಭೋಗದೊಳಡಗಿಸಿದ್ದ ಯುವರಾಜನೋರ್ವನಿಗೆ
ನಟ್ಟ ನಡುರಾತ್ರಿ ಸತ್ಯದ
ದಿಗ್ದರ್ಶನವಾಯ್ತು.
ವಿಧಿಯ ದಿನಮಾನದ
ಚಕ್ರವೇ ಅದಕೆ ಕಾರಣವಾಗಿತ್ತು. (ಭಗವಾನ್ ಬುದ್ಧ)

ಕುರುಕ್ಷೇತ್ರದ ಮಹಾಜಿರಂಗದೊಳ್
ಛಲದಂಕ ಮಲ್ಲನೋರ್ವನಿಗೆ
ಸತ್ಯದ ಸುಳಿವಾಯ್ತು.
ಸತ್ಯದರಿವಿಗೆಂತಲೇ ನರವೇಷದಾರಿ
ಪೂಜ್ಯಾತ್ಮ ಅದಕೆ ಕಾರಣವಾಗಿತ್ತು.(ಅರ್ಜುನ).

ಸೋದರರೀರ್ವರ ರಾಜ್ಯಾದಿಗಳ
ಕಲಹವೇ ಭಿನ್ನಹವಾಗಿ
ದೊರೆಯ ಕುವರನಿಗೆ ವೈರಾಗ್ಯ ಮೂಡಿತ್ತು.
ಲೌಕಿಕದಲಿ ಗೆದ್ದೂ ಸೋತ
ಭಾವವದಕೆ ಕಾರಣವಾಗಿತ್ತು. (ಬಾಹುಬಲಿ)

ಅದಮ್ಯ ಸತ್ಯಸಂಧನೊಬ್ಬನನು
ಮಿಥ್ಯೆಯಾಡಿಸುವ ಸಲುವಾಗಿ
ಮಾಯೆಯ ಜಾಲಕೆ ಕೆಡವಲಾಯ್ತು.
ದೇವನೇ ನರನಿಂದ ಕಲಿಯುವ
ವಿಧಿಯದಕೆ ಕಾರಣವಾಗಿತ್ತು. (ಹರಿಶ್ಚಂದ್ರ)

ಭುವಿಯಂತರಂಗದಲಿ ಸತ್ಯ ಪ್ರವರ್ತನೆಗೆ
ಅದಾವಾವ ಮಾರ್ಗವಿರಬಹುದು?.
ತಿಳಿದಿಲ್ಲ!.
ಅಂತೂ ನಮ್ಮದೂ ಸರದಿ ಬರುವವರೆಗೂ
ಕಾಯುವುದೇ ನಮಗೀಗ ವೇದ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...