ಭಾನುವಾರ, ಮಾರ್ಚ್ 19, 2017

ಜೀವನೋಕ್ತಿ

* ಜೀವನವೊಂದು ಕಷ್ಟ ಸುಖ, ನಗು ಅಳುಗಳ ಅನುಭವದ ಕಂತೆ. ಕೆಲವೊಮ್ಮೆ ಅವು ಅವಶ್ಯ  ಮತ್ತೆ ಕೆಲವೊಮ್ಮೆ ಅನಿರೀಕ್ಷಿತ. ಯಾವುದು ನಮ್ಮ ಪಾಲಿಗೆ ಬಂದರೂ ನಿರಾಕರಿಸಲಾಗದು.

* ಜೀವನವನ್ನು ಸರಿಯಾದ ದಾರಿಗೆ ತಿರುಗಿಸಲು ಅಥವಾ ನಿನಗೆ ಬೇಕಾದ ದಾರಿಗೆ ತಿರುಗಿಸಲು ಪ್ರತೀ ದಿನವೂ ಸುಸಮಯವೇ. ಆದರೆ ಆ ಸಮಯ ಬಳಕೆಯಲ್ಲಿ ಸಂಯಮವಿರಬೇಕು.

* ನಿನಗೆ ಒದಗಿ ಬಂದ ಸಮಯ ಹಾಲು ಮಾಡಿಕೊಂಡು ಒಳ್ಳೆ ಸಮಯಕ್ಕಾಗಿ ಕಾದರೆ ದೇವರಿರಲಿ  ನಿನಗೆ ನೀನೆ ಸಹಾಯ ಮಾಡಿಕೊಳ್ಳದ ಸ್ಥಿತಿಗೆ ತಲುಪುವೆ.

* ಯಾರಿಗೂ ಬರದಂತಹ ಅತೀ ಕ್ಲಿಷ್ಟ ಕಷ್ಟಗಳು ನಿನಗೆ ಬಂದರೆ ನೀನು ಹೆಮ್ಮೆ ಪಡಬೇಕು, ಕಾರಣ ಯಾರನ್ನು ಪರೀಕ್ಷಿಸದಷ್ಟು ನಿನ್ನನ್ನು ಪರೀಕ್ಷಿಸುತ್ತಿದ್ದಾನೆ. ನಿನ್ನ ಬಗ್ಗೆ ಅವನೂ ಕೆಲ ಕಾಲ ಯೋಚಿಸುತ್ತಿದ್ದಾನೆ ಎಂತಲೇ ಅರ್ಥ.

* ಕನಸು ಕಾಣುವ ಶಕ್ತಿಯೊಂದು ಮಾತ್ರ ಸಾಲದು, ಕಂಡ ಕನಸನ್ನು ನನಸು ಮಾಡಲು ಎಡೆ ಬಿಡದೆ ದುಡಿಯುವ ಛಾತಿ ಇದ್ದವನು ಮಾತ್ರ ಗೆಲ್ಲಬಲ್ಲ.

* ನೂರು ದಿನಗಳ ಪರಿಶ್ರಮ ಒಂದು ಘಳಿಗೆಯ ಗೆಲುವಿನ ಮಹಾ ಮಂತ್ರ.

* ಗೆದ್ದವರು ತಮ್ಮ ಸೋಲಿನ ದಾರಿಗಳನ್ನು ಮಾದರಿಯಾಗಿ ಕೊಡುತ್ತಾ ಅವುಗಳನ್ನು ಪಾಲಿಸದಿರುವಂತೆ ಸೂಚಿಸುತ್ತಾರೆ.

* ನಿನ್ನನ್ನು ಆಡಿಕೊಳ್ಳುವರಿಂದ, ತೆಗಳುವರಿಂದ ನಿನ್ನ ಜೀವನ ಇನ್ನು ಉನ್ನತಕ್ಕೇರುತ್ತದೆ.

* ನಿನ್ನ ಬೆನ್ನ ಹಿಂದೆ ಜನರೆಲ್ಲಾ ಆಡಿಕೊಳ್ಳುತ್ತಿದ್ದಾರೆಂದರೆ ನೀನು ಅವರೆಲ್ಲರಿಗಿಂತ ಬಹಳ ಮುಂದೆ ಇದ್ದೀಯೆಂದೇ ಅರ್ಥ.

* ನಿನ್ನ ಶಕ್ತಿಯ ಬಗ್ಗೆ ಯಾರಾದರೂ ಅನುಮಾನ ಪಟ್ಟರೆ ನೀನು ಬೇಸರಿಸುವ ಅಗತ್ಯವಿಲ್ಲ, ಬದಲಾಗ ಹೆಮ್ಮೆ ಪಡಬೇಕು. ಜನ ಸಾಮಾನ್ಯವಾಗಿ ಚಿನ್ನದ ಪರಿಶುದ್ಧತೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಾರೆ ಹೊರತು ಕಬ್ಬಿಣದ ಪರಿಶುದ್ಧತೆಯ ಬಗ್ಗೆ ಅಲ್ಲ.

* ಖಾಲಿ ಜೇಬು ನೂರು ಬುದ್ಧಿ ಕಲಿಸುತ್ತದೆ, ತುಂಬಿದ ಹೊಟ್ಟೆ ನೂರು ಬುದ್ಧಿ ಕೆಡಿಸುತ್ತದೆ.

* ಹಣೆ ಬರಹವೆನ್ನುವುದು ದೇವರು ಕೊಟ್ಟ ಖಾಲಿ ಹಾಳೆ, ಅಲ್ಲಿ ಬರೆಯಬೇಕಾದವರು ನಾವು ಮಾತ್ರ.

* ಛಲವಾದಿ ಸೋಲು ಬಂದು ಝಾಡಿಸುವ ವರೆವಿಗೂ ಕಾಯುತ್ತ ಕುಳಿತುಕೊಳ್ಳಲಾರ, ಬದಲಾಗಿ ಸಂಭವನೀಯ ಸೋಲನ್ನು ದೂರದಿಂದಲೇ ಅರ್ಥ ಮಾಡಿಕೊಂಡು ಅದನ್ನು ಸೋಲಿಸುವುದೇ ಅವನ ಧ್ಯೇಯವನ್ನಾಗಿ ಮಾಡಿಕೊಳ್ಳುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...