ಗುರುವಾರ, ಸೆಪ್ಟೆಂಬರ್ 22, 2016

ವಿದಾಯ ಪದ

ಕೊನೆಯ ದಿನ ಎಂದೋ ನಾ ಕಾಣೆ
ಅದೀಗಲೇ ಬಂದರು ನಾ ಮರೆಯೆ
ತಿಳಿಸುವುದ ಗೌರವನದಕೆ
ಇಷ್ಟು ದಿನ ಸಾಕಿ ಸಲುಹಿದ ಗುಡಿಗೆ
ಸತ್ಯಕ್ಕೆ ಗುರುವಾಗಿ, ಅನ್ನಕ್ಕೆ ಧಣಿಯಾಗಿ,
ನಮ್ಮ ಕಣ್ಣೊಳ್ ಧರಣಿಯಾಗಿ ಬಾಳಿದ ಬಾಳ್ಮೆಗೆ

ಕೊನೆಯ ದಿನವಿದು, ಉಳಿಯುವುದೆಂತು ,
ಬೆಳೆಯುವುದೆಂತು, ಆಗುವುದೆಂತು ಎಂಬ
ಧಾವಂತಗಳೆಲ್ಲ ನಿಶ್ಯೇಷವಾಗಿ ಹೋಗಲೇಬೇಕೆಂಬ
ಆಣತಿಯಿಲ್ಲಿ ಸಾಕಾರವಾಗುತಿದೆ.
ಮುಂದೇನಿದೆಯೋ ಕಾಣಲಿದು ಸಕಾಲ
ಕೊನೆಯಲ್ಲೂ ಕಲಿಯಬೇಕೆಂಬ ಹಂಬಲ
ಇದಲ್ಲವೇ ಬದುಕು ಕಲಿಸಿದ ಬಲ,
ಸತ್ಯವಿದು, ಅನುಭವಕ್ಕೊಂದು ಸತ್ಯ ದರ್ಶನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...